ಇಂದಬಿ.ಶಿವಕುಮಾರ್ಶಿವ ಸದನ , ಸಿಟಿ ಆಸ್ಪತ್ರೆ ಹತಿರಉಡುಪಿ.ದಯವಿಟ್ಟು ಈ ಲೇಖನವನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಬೇಕೆಂದು ಕೋರುತ್ತೇನೆ.
ಲೇಖನ :
ಪಂಚಾಯತ್ ವ್ಯವಸ್ಥೆ ಅಬಿವೃದ್ಧಿಗಾಗಿ ಮೊಬೈಲ್ ಸಂಪರ್ಕ.
ನಿಮ್ಮ ಗ್ರಾಮದಲ್ಲಿ ಸಮಸ್ಯೆಗಳ ಕುರಿತು ಸಂಬಂದಪಟ್ಟ ಗ್ರಾಮ ಪಂಚಾಯತ್ ಅಥವಾ ಜಿಲ್ಲಾ ಪಂಚಾಯತ್ ನಲ್ಲಿ ನಲ್ಲಿ ದೂರು ನೀಡಲು ಹೋಗಿದ್ದು, ಅಲ್ಲಿ ಸಂಬಂದಪಟ್ಟ ಅಧಿಕಾರಿಗಳು ಇರದೇ, ಹಲವು ಬಾರಿ ಕಛೇರಿಗೆ ಅಲೆದಾಡಿ ಸುಸ್ತಾಗಿದ್ದೀರಾ, ಸಂಬಂದಪಟ್ಟ ಅಧಿಕಾರಿ ಎಲ್ಲಿಗೆ ತೆರಳಿದ್ದಾರೆ , ಯಾವಾಗ ಬರುತ್ತಾರೆ , ನಿಮಗೆ ಸಿಗುವರೇ, ಅವರನ್ನು ಸಂಪಕರ್ಿಸಲು ಅವರ ಯಾವುದೇ ವೈಯಕ್ತಿಕ ಮೊಬೈಲ್ ಸಂ.ಇಲ್ಲದೇ ಪರದಾಡುತ್ತಿದ್ದೀರಾ , ನಿಮ್ಮ ಈ ಎಲ್ಲ ಸಮಸ್ಯೆಗಳಿಗೆ ಈಗ ಪರಿಹಾರ ಇದೆ. ಪ್ರಸ್ತುತ ಸಕರ್ಾರವು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿಯಲ್ಲಿರುವ , ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳಿಗೆ ಸಕರ್ಾರಿ ಸ್ವಾಮ್ಯದ ಬಿ.ಎಸ್.ಎನ್. ಎಲ್. ಸಂಸ್ಥೆಯ ಸಿ.ಯು.ಜಿ(ಕ್ಲೋಸ್ ಯೂಸರ್ ಗ್ರೂಪ್) ನೆಟ್ ವಕರ್್ನಡಿಯಲ್ಲಿ ಮೊಬೈಲ್ ದೂರವಾಣಿ ಸಂಪರ್ಕ ನೀಡಿದೆ. ಈ ನೆಟ್ವಕ್ರ್ ಮೂಲಕ ದೂರವಾಣಿ ಸಂಪರ್ಕ ಹೊಂದಿರುವ ಅಧಿಕಾರಿಗಳು ತಮ್ಮ ತಮ್ಮಲ್ಲಿ ವಿಚಾರ ವಿನಿಮಯ ಮಾಡಲು ಯಾವುದೇ ಮೊತ್ತವನ್ನು ನೀಡಬೇಕಾಗಿಲ್ಲ. ಆದರೆ ಮಾಸಿಕ ನಿದರ್ಿಷ್ಟ ಮೊತ್ತವನ್ನು ಮಾತ್ರ ಪಾವತಿಸಬೇಕಾಗಿರುತ್ತದೆ. ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿರುತ್ತಿರುವ ಜಿಲ್ಲಾ ಮತ್ತು ತಾಲೂಕು ಅಧಿಕಾರಿಗಳಿಗೆ ಪ್ಲಾನ್ 499 ಮತ್ತು ಗ್ರಾಮ ಪಂಚಾಯತ್ ಮತ್ತು ಹೋಬಳಿ ಮಟ್ಟದ ಅಧಿಕಾರಿಗಳಿಗೆ ಪ್ಲಾನ್ ನಂ.199 ಎಂಬ ಯೋಜನೆಗಳ ಮೂಲಕ ಮೊಬೈಲ್ ಸಂಪರ್ಕ ನೀಡಲಾಗಿದೆ. ಈ ಸಂಪರ್ಕಗಳನ್ನು ಹೊಂದಿರುವ ಅಧಿಕಾರಿ ಸಿ.ಯು.ಜಿ. ಅಡಿಯಲ್ಲಿರುವ ರಾಜ್ಯದ ಯಾವುದೇ ಅಧಿಕಾರಿಯೊಂದಿಗೆ ಯಾವುದೇ ಶುಲ್ಕವಿಲ್ಲದೇ ಮಾತನಾಡಬಹುದಾಗಿದ್ದು, ಸಿ.ಯು.ಜಿ. ಯಲ್ಲಿ ಸೇರದ ದೂರವಾಣಿ ಸಂಪರ್ಕದೊಂದಿಗೆ ಮಾತನಾಡಬೇಕಾಗಿದ್ದಲ್ಲಿ ಪ್ಲಾನ್ 499 ಹೊಂದಿರುವವರು 750 ನಿಮಿಷಗಳು (ಪಲ್ಸ್ ದರ 15 ಸೆಕೆಂಡ್) ಮತ್ತು ಪ್ಲಾನ್ ನಂ.199 ಹೊಂದಿರುವವರು 100 ನಿಮಿಷಗಳು (ಪಲ್ಸ್ ದರ 60 ಸೆಕೆಂಡ್) ಯಾವುದೇ ಶುಲ್ಕವಿಲ್ಲದೇ ಬಳಸಬಹುದಾಗಿದೆ. ಹಾಗೂ ಈ ಅಧಿಕಾರಿಗಳಿಗೆ ಅವರುಗಳು ಹೊಂದಿರುವ ಪ್ಲಾನ್ ಗಳಗೆ ಕ್ರಮವಾಗಿ ರೂ.750.00 ಮತ್ತು ರೂ.250.00 ರೂ. ಗಳ ದೂರವಾಣಿ ಭತ್ಯೆಯನ್ನು ನಿಗಧಿಪಡಿಸಿದೆ. ಒಂದು ವೇಳೆ ಉಚಿತವಾಗಿ ನೀಡಲಾಗಿರುವ ಅವಧಿಯನ್ನು ಮೀರಿ ಹೆಚ್ಚುವರಿ ದೂರವಾಣಿ ಬಳಕೆ ಮಾಡಿದಲ್ಲಿ , ಹೆಚ್ಚುವರಿಯಾಗಿ ಬಳಕೆ ಮಾಡಿದ ಅವಧಿಯ ವೆಚ್ಚವನ್ನು ಸಂಬಂದಪಟ್ಟ ಅಧಿಕಾರಿಗಳೇ ನೇರವಾಗಿ ಬಿ.ಎಸ್.ಎನ್.ಎಲ್. ಗೆ ಪಾವತಿಸಬೇಕಾಗಿರುತ್ತದೆ. ಈ ದೂರವಾಣಿ ಸಂಪರ್ಕ ಕಲ್ಪಿಸಿರುವ ಅಧಿಕಾರಿ , ಈ ದೂರವಾಣಿಯಲ್ಲಿ ಯಾವುದೇ ಸಮಯದಲ್ಲಿ ಸ್ವಿಚ್ ಆಫ್ ಮಾಡುವಂತಿಲ್ಲ ಮತ್ತು ದಿನದ 24 ಗಂಟೆಯೂ ಸಹ ಚಾಲ್ತಿಯಲ್ಲಿಟ್ಟಿರಬೇಕು. ಇದರಿಂದಾಗಿ ತುತರ್ು ಸಮಯದಲ್ಲಿ ಸದರಿ ಅಧಿಕಾರಿಗಳನ್ನು ಸಂಪಕರ್ಿಸಲು ಸಾಧ್ಯವಾಗುತ್ತದೆ. ಒಂದು ವೇಳೆ ವಗರ್ಾವಣೆಯಾಗಿ ತೆರಳಬೇಕಾದಲ್ಲಿ , ಅವರು ಆ ತಿಂಗಳಿನವರೆಗಿನ ಬಿಲ್ ಪಾವತಿಸಿ, ಸಿಮ್ ನ್ನು ಪ್ರಬಾರ ವಹಿಸಿಕೊಳ್ಳುವ ಅಧಿಕಾರಿಗೆ ಹಸ್ತಾಂತರಿಸಬೇಕಾಗಿರುತ್ತದೆ. ಉಡುಪಿ ಜಿಲ್ಲೆಯಲ್ಲಿ, ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿರುವ 146 ಗ್ರಾಮ ಪಂಚಾಯತ್ ಕಾರ್ಯದಶರ್ಿಗಳಿಗೆ, 15 ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ , 15 ತಾಲೂಕು ಪಂಚಾಯತ್ ಅಧಿಕಾರಿಗಳಿಗೆ ಹಾಗೂ 27 ಮಂದಿ ಇಂಜಿನಿಯರ್ ಗಳು ಸೇರಿದಂತೆ ಒಟ್ಟು 203 ಮಂದಿಗೆ ಸಿ.ಯು.ಜಿ(ಕ್ಲೋಸ್ ಯೂಸರ್ ಗ್ರೂಪ್) ನೆಟ್ ವಕರ್್ ನಡಿಯಲ್ಲಿ ಸಿಮ್ ಕಾಡ್ರ್ ಗಳನ್ನು ವಿತರಿಸಲಾಗಿದೆ.
No comments:
Post a Comment