Wednesday, April 7, 2010

ವೋಲ್ವೋ ಬಸ್ : ಲೇಖನ

ಇಂದಬಿ.ಶಿವಕುಮಾರ್ಶಿವ ಸದನ , ಸಿಟಿ ಆಸ್ಪತ್ರೆ ಹತಿರಉಡುಪಿ. ಮೊ: 9964141590
ದಯವಿಟ್ಟು ಈ ಲೇಖನವನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಬೇಕೆಂದು ಕೋರುತ್ತೇನೆ.
ಲೇಖನ :
ಸಾಕಾರಗೊಂಡ ಕಾತುರ ,ನಿರೀಕ್ಷೆ---ಅವಿಭಜಿತ ದ.ಕ. ಜಿಲ್ಲೆಗೆ ಸಕರ್ಾರಿ ವೋಲ್ವೋ ಸಾರಿಗೆ.
ಅವಿಭಜಿತ ದ. ಕನ್ನಡ ಜಿಲ್ಲೆಯಲ್ಲಿ (ಮಂಗಳೂರು-ಉಡುಪಿ ಜಿಲ್ಲೆ) ಯ ಸಾರಿಗೆ ವ್ಯವಸ್ಥೆಯಲ್ಲಿ ಖಾಸಗಿ ವಾಹನಗಳ ಪಾಲು ಹೆಚ್ಚು. ಖಾಸಗಿ ವಾಹನ ವ್ಯವಸ್ಥೆಯಲ್ಲಿನ ಸಮಸ್ಯೆಗಳಿಗೆ ಬೇಸೆತ್ತ ಉಭಯ ಜಿಲ್ಲೆಗಳ ನಾಗರೀಕರು ಮತ್ತು ಜನಪ್ರತಿನಿದಿಗಳು ಸಕರ್ಾರಿ ಸಾರಿಗೆ ಸೌಕರ್ಯ ಒದಗಿಸುವಂತೆ ಸರಕಾರಕ್ಕೆ ಹಲವು ಬಾರಿ ಒತ್ತಡ ಮತ್ತು ಮನವಿ ಮಾಡಿದ್ದು ಈಗ ಫಲಿಸಿದೆ. ಪ್ರಸ್ತುತ ಸಕರ್ಾರ ನಾಗರೀಕರ ಬೇಡಿಕೆಗೆ ಸ್ಪಂದಿಸಿ , ಮಣಿಪಾಲ- ಮಂಗಳೂರು ನಡುವೆ ಹವಾ ನಿಯಂತ್ರಿತ ಸುಖಾಸೀನ ವೋಲ್ವೋ ಪ್ರಯಾಣವನ್ನು ಪ್ರಾರಂಭಿಸಿದೆ. ಈ ಬಸ್ಸುಗಳು ಪ್ರತಿದಿನ ಬೆಳಗ್ಗೆ 7.30 ರಿಂದ ಸಂಜೆ 6.30 ರ ವರೆಗೆ ಪ್ರತಿ ಗಂಟೆಗೊಂದು, ಮಂಗಳೂರು ಮತ್ತು ಮಣಿಪಾಲದಿಂದ ಹೊರಡಲಿದೆ. ಸ್ವೀಡನ್ ನಿಂದ ಆಮದು ಮಾಡಲಾಗಿರುವ ಈ ಬಸ್ ನಲ್ಲಿ 38 ಸೀಟುಗಳಿದ್ದು, ಎಫ್.ಎಂ. ಮತ್ತು ಡಿವಿಡಿ(ಆಡಿಯೋ ಮಾತ್ರ)) ವ್ಯವಸ್ಥೆಯಿದೆ. ಈ ವಾಹನದಲ್ಲಿ ಮಂಗಳೂರಿನಿಂದ ಮಣಿಪಾಲಕ್ಕೆ ಪ್ರಯಾಣ ದರ ರೂ.60.00 ಆಗಿದ್ದು, ಮಂಗಳೂರು ಮಣಿಪಾಲದ ಮಧ್ಯೆ ಹವಾನಿಯಂತ್ರಿತ ಕಾರುಗಳಲ್ಲಿ ಓಡಾಡುವವರು ಇನ್ನು ಮುಂದೆ ತಮ್ಮ ಕಾರುಗಳನ್ನು ಬಿಟ್ಟು ಈ ಬಸ್ಸುಗಳಲ್ಲಿ ಓಡಾಡಬಹುದು. ಅವರಿಗೆ ಹವಾ ನಿಯಂತ್ರಿತ ಕಾರುಗಳಲ್ಲಿ ತಗಲುವ ವೆಚ್ಚಕ್ಕಿಂತ ಈ ಪ್ರಯಾಣ ದರ ತುಂಬಾ ಅಗ್ಗವಾಗುತ್ತದೆ. ಮಣಿಪಾಲದಿಂದ ನಿಗಧಿತ ಪ್ರಮುಖ ಸ್ಥಳಗಳಾದ ಉಡುಪಿ, ಪಡುಬಿದ್ರಿ, ಮೂಲ್ಕಿ, ಸುರತ್ಕಲ್ ಗಳಲ್ಲಿ ನಿಲುಗಡೆ ಹೊಂದಿರುವ ಈ ವಾಹನ ಉಭಯ ಜಿಲ್ಲೆಗಳ ನಾಗರೀಕರಿಗೆ ಅತ್ಯಂತ ಅನುಕೂಲವಾಗಿದ್ದು, ಈ ಬಸ್ ಪ್ರಯಾಣ ಆರಂಭವಾದ ದಿನ ಪ್ರತಿ ಟ್ರಿಪ್ ನಲ್ಲಿ ಸಂಪೂರ್ಣ ಸೀಟುಗಳು ಭತರ್ಿಯಾಗಿ , ಜನ ನಿಂತುಕೊಂಡೇ ಪ್ರಯಾಣ ಮಾಡಿದ್ದು,ಕ.ರಾ.ರ.ಸಾ. ನಿಗಮಕ್ಕೆ ನಿರೀಕ್ಷೆಗೂ ಮಿಗಿಲಾಗಿ ಆದಾಯ ಬಂದಿದ್ದು, ನಾಗರೀಕರ ಬೇಡಿಕೆಯಂತೆ ಮರುದಿನದಿಂದ ಹೆಚ್ಚುವರಿಯಾಗಿ 2 ಬಸ್ ಗಳನ್ನು ಓಡಿಸಲಾಗುತ್ತಿದ್ದು, ನಾಗರೀಕರು ಈ ಸಕರ್ಾರಿ ಸಾರಿಗೆ ವ್ಯವಸ್ಥೆಗಾಗಿ ಎಷ್ಟು ಕಾತುರದಿಂದ ಕಾಯುತ್ತಿದ್ದರು ಎಂಬುದನ್ನು ಅರಿಯಬಹುದಾಗಿದೆ. ಮಾಚರ್್ 27 , 2010 ರಂದು ಮಣಿಪಾಲದಲ್ಲಿ ಈ ಬಸ್ ಸಂಚಾರಕ್ಕೆ ರಾಜ್ಯ ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ವಿ.ಎಸ್. ಆಚಾರ್ಯ ರವರು ಹಸಿರು ನಿಶಾನೆ ತೋರಿಸಿ ಉದ್ಗಾಟಿಸಿದ್ದು, ಮಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ. ಕೃಷ್ಣ ಪಾಲೇಮಾರ್ ರವರು ಬಸ್ ಸಂಚಾರಕ್ಕೆ ಚಾಲನೆ ನೀಡಿದರು. ಉದ್ಘಾಟನೆ ನಂತರ ಮಾತನಾಡಿದ ಡಾ ವಿ.ಎಸ್. ಆಚಾರ್ಯ ರವರು ಉಡುಪಿ- ಮಂಗಳೂರು ನಡುವಿನ ವೋಲ್ವೋ ಬಸ್ ಓಡಾಟ ಇದೊಂದು ಐತಿಹಾಸಿಕ ಕ್ರಮವಾಗಿದ್ದು , ಸಕರ್ಾರಿ ಬಸ್ ಗಳ ಸೇವೆ ಮತ್ತು ಗುಣಮಟ್ಟವನ್ನು ನೋಡಿ , ಖಾಸಗಿಯವರು ಅದನ್ನು ಅಳವಡಿಸಿಕೊಂಡು ಆರೋಗ್ಯಕರ ಸ್ಪಧರ್ೆ ನಡೆಸಬೇಕು ಎಂದು ಖಾಸಗಿ ಬಸ್ ಮಾಲೀಕರಿಗೆ ಕರೆ ನೀಡಿದರು. ಒಟ್ಟಿನಲ್ಲಿ ಅವಿಭಜಿತ ಜಿಲ್ಲೆಯ ಜನರ ಬಹುದಿನಗಳ ನಿರೀಕ್ಷೆ , ಕಾತುರ ಈಗ ಸಾಕಾರಗೊಂಡಿದೆ.

No comments:

Post a Comment