ಇಂದಬಿ.ಶಿವಕುಮಾರ್ಶಿವ ಸದನ , ಸಿಟಿ ಆಸ್ಪತ್ರೆ ಹತಿರಉಡುಪಿ.ದಯವಿಟ್ಟು ಈ ಲೇಖನವನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಬೇಕೆಂದು ಕೋರುತ್ತೇನೆ.
ಲೇಖನ :
ಸರಳತೆಯ ಗಾಯನ ಕಲಾವಿದ - ಗಣೇಶ್ ಕುಮಾರ್ ಗಂಗೊಳ್ಳಿ
ಸುಗಮ ಸಂಗೀತವೇ ಆಗಲಿ, ಜಾನಪದ ಸಂಗೀತವೆ ಆಗಲಿ, ಯಾವುದಕ್ಕೂ ಸೈ. ಎರಡರಲ್ಲೂ ಸಂಪೂರ್ಣ ಭಾವಪರವಶರಾಗಿ ಹಾಡುವ ಗ್ರಾಮೀಣ ಪ್ರದೇಶದ ಕಲಾವಿದ ಗಣೇಶ್ ಕುಮಾರ್ ಗಂಗೊಳ್ಳಿ ರವರಿಗೆ ಸಂಗೀತವೇ ಜೀವನ , ವೃತ್ತಿ , ಪ್ರವೃತ್ತಿ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಮೇಲ್ ಗಂಗೋಳ್ಳಿಯಲ್ಲಿ ಶ್ರೀಮತಿ. ಚಂದು ಮತ್ತು ದಿವಂಗತ ನಾರಾಯಣ ರವರ ಹಿರಿಯ ಪುತ್ರರಾಗಿ ಜನಿಸಿದ ಶ್ರೀಯುತರು, ಪ್ರಾರಂಭದಲ್ಲಿ ಸ್ವಂತ ಪರಿಶ್ರಮದಿಂದ ಹಾಡುತ್ತಾ, ಸಂಗೀತ ಅಭ್ಯಸಿಸಿರುವ ಆಧುನಿಕ ಏಕಲವ್ಯನಾಗಿದ್ದು ನಂತರ , ಮದೂರು ಬಾಲಸುಬ್ರಹ್ಮಣ್ಯ ಮತ್ತು ಉಡುಪಿ ವಾಸುದೇವ ಭಟ್ ರವರಿಂದ ಸುಗಮ ಸಂಗೀತವನ್ನು ಹಾಗೂ ಮಹಾಬಲೇಶ್ವರ ಭಾಗವತ್ ರವರಿಂದ ಹಿಂದೂಸ್ತಾನಿ ಸಂಗೀತವನ್ನು ಅಭ್ಯಾಸ ಮಾಡಿದ್ದಾರೆ. ಪ್ರತಿ ವರ್ಷ ನಿರಂತರವಾಗಿ ಕಾರ್ಯಕ್ರಮಗಳನ್ನು ನೀಡುತ್ತಾ, ತನ್ನ ಕಲೆಗೆ ಪ್ರೋತ್ಸಾಹ ನೀಡುತ್ತಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಾತರ್ಾ ಇಲಾಖೆಗಳಿಗೆ ಧನ್ಯವಾದ ಅಪರ್ಿಸುವ ಈ ಕಲಾವಿದ , ತನ್ನದೇ ಅಕರ್ೆಸ್ಟ್ರಾ ತಂಡದೊಂದಿಗೆ ರಾಜ್ಯೋತ್ಸವ ಹಾಗೂ ಗಣೇಶ ಹಬ್ಬಗಳಂದು ರಾಜ್ಯದ ವಿವಿದೆಡೆ ನೂರಾರು ಕಾರ್ಯಕ್ರಮವನ್ನು ನೀಡಿದ್ದಾರೆ. ಅಲ್ಲದೇ ಹಲವಾರು ಸಂಗೀತ ಕಾರ್ಯಕ್ರಮಗಳಲ್ಲಿ ತೀಪುಗಾರರಾಗಿ ಸೇವೆ ಸಲ್ಲಿಸಿದ್ದು, ಹಾಸ್ಟೆಲ್ ನಲ್ಲಿ ಕಲಿಯುತ್ತಿರುವ ಹಿಂದುಳಿದ ವರ್ಗಗಳ ಹೆಣ್ಣು ಮಕ್ಕಳಿಗೆ ಸಂಗೀತ ತರಭೇತಿಯನ್ನೂ, ಹಾಗೂ ಆರೋಗ್ಯ ಇಲಾಖೆಯ ಆಶಾ ತರಭೇತಿ ಕಾರ್ಯಕ್ರಮದ ಜಿಲ್ಲಾ ಸಂಪರ್ಕ ಕೌಶಲ್ಯ ತರಭೇತಿದಾರರಾಗಿ ಆಶಾ ಕಾರ್ಯಕತರ್ೆಯರಿಗೆ ತರಭೇತಿಯನ್ನು ನೀಡುತ್ತಿದ್ದಾರೆ. ಸಂಗೀತ ಮಾತ್ರವಲ್ಲದೇ ತನ್ನದೇ ಆದ " ಸಂದೇಶ" ಬೀದಿ ನಾಟಕ ತಂಡವನ್ನು ಕಟ್ಟಿ , ಅದರ ಮೂಲಕ ಸಾಮಾಜಿಕ ಜಾಗೃತಿ ಉಂಟು ಮಾಡುವ ಕಾರ್ಯಕ್ರಮಗಳಾದ ಮಾಹಿತಿ ಹಕ್ಕು , ಸ್ತ್ರೀ ಶಕ್ತಿ, ಸಂಧ್ಯಾ ಸುರಕ್ಷೆ , ಗ್ರಾಹಕ ಜಾಗೃತಿ , ಸಾವಯವ ಕೃಷಿ ಹಾಗೂ ಆರೋಗ್ಯಕ್ಕೆ ಸಂಬಂದಿಸಿದಂತೆ ಬೀದಿ ನಾಟಕ ಪ್ರದಶರ್ಿಸಿದ್ದಾರೆ. ಉತ್ತಮ ವಾಕ್ ಪ್ರವೀಣ್ಯತೆಯನ್ನು ಹೊಂದಿದ್ದು, ಅನೇಕ ಸರಕಾರಿ ಕಾರ್ಯಕ್ರಮಗಳಲ್ಲಿ ನಿರೂಪಕರಾಗಿ ಕಾರ್ಯ ನಿರ್ವಸಿರುವುದಲ್ಲದೇ, ಮಂಗಳೂರು ಆಕಾಶವಾಣಿಯ "ಬಿ" ಗ್ರೇಡ್ ಕಲಾವಿದರಾಗಿರುವ ಶ್ರೀಯುತರು , ದೂರದರ್ಶನದ ಚಂದನ ವಾಹಿನಿಯಲ್ಲಿ ಭಾವಗೀತೆ ಮತ್ತು ಜನಪದ ಗೀತೆ ಕಾರ್ಯಕ್ರಮವನ್ನು ಸಾದರಪಡಿಸಿದ್ದಾರೆ.ಮತ್ತು ಮಂಗಳೂರು ಆಕಾಶವಾಣಿಯ ಹಲವಾರು ಜಾಹೀರಾತುಗಳಿಗೆ ದ್ವನಿ ನೀಡಿದ್ದಾರೆ. ಶ್ರೀಯುತರಿಗೆ ಮಂಗಳೂರಿನಲ್ಲಿ "ರಾಜ್ಯಮಟ್ಟದ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ-2000" , ಕುಂದಾಪುರ ತಾಲೂಕು ಬೈಂದೂರಿನಲ್ಲಿ ನಡೆದ 2006 ರ ಸುವರ್ಣ ಸಂಸ್ಕೃತಿ ದಿಬ್ಬಣ ಕಾರ್ಯಕ್ರಮದಲ್ಲಿ ಸನ್ಮಾನ , 2006 ರ "ಉಡುಪಿ ಜಿಲ್ಲಾ ಸುವರ್ಣ ಕನರ್ಾಟಕ ರಾಜ್ಯೋತ್ಸವ ಪ್ರಶಸ್ತಿ," 2006 ರಲ್ಲಿ ಉಡುಪಿ ಆಫೀಸರ್ಸ್ ಕ್ಲಬ್ ವತಿಯಿಂದ ಸಂಗೀತ ಸೇವೆಯ ಸಾಧನೆಗಾಗಿ "ಉತ್ತಮ ಸಂಗೀತ ಗಾಯಕ" ಪ್ರಶಸ್ತಿ ,ಗಂಗೊಳ್ಳಿ, ಕುಂದಾಪುರ , ಬೈಂದೂರು ಗಳಲ್ಲಿ ಸನ್ಮಾನ ಹಾಗೂ 2008 ಹಾಗೂ 2009 ರಲ್ಲಿ ಮುಂಭೈನಲ್ಲಿ ಸಂಗೀತ ಕಾರ್ಯಕ್ರಮ ನೀಡಲು ಆಹ್ವಾನಿಸಿ ಸನ್ಮಾನಿಸಲಾಗಿದೆ. ಶ್ರೀಯುತರು 2007 ರಲ್ಲಿ ಉಡುಪಿಯಲ್ಲಿ ನಡೆದ 74 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕುಂದಗನ್ನಡ ಸಂಗೀತ ಕಾರ್ಯಕ್ರಮ ನೀಡಿದ್ದು , ಮೈಸೂರು, ಬೆಂಗಳೂರು , ಉ.ಕನ್ನಡ ಸೇರಿದಂತೆ ರಾಜ್ಯಾದ್ಯಂತ ಮತ್ತು ಹೊರ ರಾಜ್ಯದ ಮುಂಭ್ಯೆ ನಲ್ಲಿ ಸಹ ಸುಗಮ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಸಕರ್ಾರದ ಕಾರ್ಯಕ್ರಮಗಳಲ್ಲಿ ಒಂದಾದ ಭಾಗ್ಯಲಕ್ಷ್ಮಿ ಕುರಿತ ಸಾಕ್ಷ್ಯಚಿತ್ರದಲ್ಲಿ ಅಭಿನಯಿಸಿರುವುದಲ್ಲದೇ, "ಕುಂದಗನ್ನಡ ಜನಪದ ಗೀತೆ" ಹಾಗೂ "ಕೂಲಿಯ ಬಾಲಕರು ಶಾಲೆಗೆ ಬಂದರು" ಎಂಬ 2 ಧ್ವನಿ ಸುರುಳಿಗಳನ್ನು ಸಹ ಬಿಡುಗಡೆ ಮಾಡಿದ್ದಾರೆ. ಸಂಗೀತ ಕಲಾವಿದನಿಗೆ ಸ್ವರ ಮಾಧುರ್ಯ ಕಾಪಾಡಿಕೊಳ್ಳುವುದು ಅಗತ್ಯ ಎಂದು ಮನಗಂಡಿರುವ ಈ ಕಲಾವಿದ , ಆಹಾರ, ಕುಡಿಯುವ ನೀರಿನ ವಿಷಯದಲ್ಲಿ ಅತ್ಯಂತ ಶಿಸ್ತು ಅಳವಡಿಸಿಕೊಂಡಿದ್ದಾರೆ. ಯಾವುದೇ ಪ್ರಶಸ್ತಿ , ಸನ್ಮಾನ ಪಡೆದರೂ ಕಲಾವಿದನಿಗೆ ವಿಧೇಯತೆ ಮುಖ್ಯವೆನ್ನುವ ಇವರು , ಮೃದುಭಾಷಿ , ಸರಳತೆ , ಮುಗ್ಧತೆ ಹೊಂದಿರುವ ಕಲಾವಿದರಾಗಿದ್ದಾರೆ.
(ಫೋಟೋ ಗಣೇಶ್ ಪೈಲ್ ನಲ್ಲಿದೆ.)
No comments:
Post a Comment