ಗ್ರಾಮೀಣ ಜನರ ಆರೋಗ್ಯ "ಆಶಾ"
ಯಾವುದೇ ದೇಶ ಅಬಿವೃದ್ಧಿ ಹೊಂದಲು ಆ ದೇಶದ ಆಥರ್ಿಕ ಅಭಿವೃದ್ದಿಗಿಂತ ಮುಖ್ಯವಾಗಿ ದೇಶದ ಜನರ ಆರೋಗ್ಯ ಅಬಿವೃದ್ಧಿ ಅತ್ಯಂತ ಮುಖ್ಯ. ಆದ್ದರಿಂದಲೇ ವಿಶ್ವದ ಎಲ್ಲಾ ರಾಷ್ಟ್ರಗಳು ತಮ್ಮ ಪ್ರಜೆಗಳ ಆರೋಗ್ಯ ಅಭಿವೃದ್ದಿಗಾಗಿ ಅತ್ಯಂತ ಹೆಚ್ಚು ಗಮನ ಹರಿಸುತ್ತಿದ್ದು, ತಮ್ಮ ಪ್ರತಿ ವರ್ಷದ ಬಜೆಟ್ ನಲ್ಲಿ ಅತ್ಯಂತ ಹೆಚ್ಚು ಹಣವನ್ನು ಆರೋಗ್ಯಕ್ಕಾಗಿ ಮೀಸಲಾಗಿಡುತ್ತಿವೆ. ಆರೋಗ್ಯವೇ ಭಾಗ್ಯ ಎಂಬಂತೆ, ಆರೋಗ್ಯವಂಥ ಸಮಾಜ ರಾಷ್ಟ್ರದ ಅಭಿವೃದ್ದಿಗೆ ಅಗತ್ಯ. ನಮ್ಮ ರಾಷ್ಟ್ರದಲ್ಲಿ ಅತ್ಯಂತ ಹೆಚ್ಚು ಜನ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದು, ಗ್ರಾಮೀಣ ಜನತೆಯ ಆರೋಗ್ಯವನ್ನು ಉತ್ತಮಗೊಳಿಸಲು 2005 ರ ಏಪ್ರಿಲ್ 12 ರಂದು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ನ್ನು ಸಕರ್ಾರ ಜಾರಿಗೆ ತಂದಿದೆ. ಈ ಕಾರ್ಯಕ್ರಮದ ಒಂದು ಅಂಗವಾಗಿ ಗ್ರಾಮೀಣ ಮಹಿಳೆಯರಲ್ಲಿ ಸ್ವಯಂ ಸೇವಕರನ್ನು ಗುರುತಿಸಿ ಅವರಿಗೆ ಆಶಾ ಕಾರ್ಯಕರ್ತರಾಗಿ ತರಬೇತಿ ನೀಡಲಾಗುತ್ತದೆ. ಈ ಕಾರ್ಯಕತರ್ೆಯರು ಗ್ರಾಮೀಣ ಜನತೆ ಮತ್ತು ಆರೋಗ್ಯ ಕಾರ್ಯಕ್ರಮಗಳ ಮದ್ಯೆ ಸೇತುವೆಯಂತೆ ಕಾರ್ಯ ನಿರ್ವಹಿಸಿ ರಾಷ್ಟ್ರೀಯ ಆರೋಗ್ಯ ಅಭಿವೃದ್ಧಿಮತ್ತು ಜನಸಂಖ್ಯೆ ನೀತಿ ಸಾಧನೆಯ ಅಬಿವೃದ್ಧಿಗೆ ನೆರವು ನೀಡಲಿದ್ದಾರೆ. ಆಶಾಗೆ ಬೇಕಾದ ಅರ್ಹತೆ : ಸ್ಥಳೀಯ ಗ್ರಾಮದಲ್ಲಿ ವಾಸಿಸುವ ,25 ರಿಂದ 45 ವರ್ಷದೊಳಗಿನ , 8 ನೇ ತರಗತಿ ಉತ್ತೀರ್ಣರಾಗಿರುವ ವಿವಾಹಿತ/ವಿಧವೆ/ ವಿಚ್ಛೇದಿತ ಮಹಿಳೆಯರು ಆಶಾ ತರಭೇತಿ ಪಡೆಯಲು ಅರ್ಹರಿರುತ್ತಾರೆ.ತರಭೇತಿ: ಆಯ್ಕೆಯಾದ ಮಹಿಳೆಯರಿಗೆ 23 ದಿನಗಳ ತರಬೇತಿಯನ್ನು ನೀಡಲಾಗುವುದು , ತರಭೇತಿಯ ಅವಧಿಯಲ್ಲಿ ಉಚಿತ ಊಟ , ವಸತಿಯೊಂದಿಗೆ ರೂ.1500.00 ಗಳ ತರಭೇತಿ ಭತ್ಯೆಯನ್ನು ನೀಡಲಾಗುವುದು. ತರಭೇತಿಯಲ್ಲಿ, ಸಾಮೂಹಿಕ ಔಷಧ ವಿತರಣೆ, ನವಜಾತ ಶಿಶು ಆರೋಗ್ಯ, ಗಭರ್ಿಣಿಯರ ಆರೋಗ್ಯ, ಸ್ತನಪಾನದ ಮಹತ್ವ, ಶೌಚಾಲಯಗಳ ಬಳಕೆಯ ಮಹತ್ವ , ಮಹಿಳೆಯರಿಗೆ ಸಂಬಂದಿಸಿದ ಸಮಸ್ಯೆಗಳು ಹಾಗೂ ಪ್ರಥಮ ಚಿಕಿತ್ಸೆ ನೀಡುವ ಕುರಿತಂತೆ ತರಬೇತಿ ನೀಡಲಾಗುವುದು. ತರಬೇತಿ ಪಡೆದ ನಂತರ ಆಶಾ ಕಾರ್ಯಕತರ್ೆಯರು ತಮ್ಮ ಗ್ರಾಮದ ಪ್ರತಿ ಮನೆಯನ್ನು ಸಂಪಕರ್ಿಸಿ , ಗ್ರಾಮದಲ್ಲಿರುವ ಆರೋಗ್ಯಕ್ಕೆ ಸಂಬಂದಪಟ್ಟ ಸಮಸ್ಯೆಗಳನ್ನು ತಿಳಿದು, ರೋಗ ಪೀಡಿತರನ್ನು ಸ್ಥಳಿಯ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಸೂಖ್ತ ಚಿಕಿತ್ಸೆಯನ್ನು ದೂರಕಿಸುವರು. ಗ್ರಾಮದಲ್ಲಿರುವ ಗಭರ್ಿಣಿಯರಿಗೆ ತೆಗೆದುಕೊಳ್ಳಬೇಕಾದ ಪೌಷ್ಠಿಕ ಆಹಾರ, ಚುಚ್ಚು ಮದ್ದುಗಳು , ಮಾತ್ರೆಗಳು, ಪ್ರಸವ ಪೂರ್ವ ನಿಯಮಿತ ತಪಾಸಣೆ,ಶುಚಿತ್ವ , ಕುಟುಂಬ ಯೋಜನೆಯ ಮಹತ್ವ , ಗರ್ಭ ನಿರೋಧಕಗಳ ಬಳಕೆ ಕುರಿತು ಮಾಹಿತಿಯನ್ನು ನೀಡುವರು. ಅಲ್ಲದೇ ಆಶಾ ಕಾರ್ಯಕರ್ತರಿಗೆ ಆರೋಗ್ಯ ಕಿಟ್ ನೀಡಲಾಗುತ್ತಿದ್ದು,ಅವಶ್ಯವಿದ್ದಲ್ಲಿ ಪ್ರಥಮ ಚಿಕಿತ್ಸೆಯನ್ನು ಸಹ ಆಶಾ ಕಾರ್ಯಕರ್ತರು ನೀಡುವರು. ಗ್ರಾಮದಲ್ಲಿ ಶೌಚಾಲಯಗಳ ಬಳಕೆ, ಆರೋಗ್ಯಕರ ಜೀವನ ವಿಧಾನ, ಗ್ರಾಮದ ಹದಿಹರೆಯದ ಹೆಣ್ಣುಮಕ್ಕಳ ಸಮಸ್ಯೆಗಳಿಗೆ ಪರಿಹಾರ ಮತ್ತು ಆರೋಗ್ಯ ಇಲಾಖೆಯ ಕಾರ್ಯಕ್ರಮಗಳನ್ನು ಗ್ರಾಮಸ್ಥರಿಗೆ ತಲುಪಿಸುವುದಲ್ಲದೇ, ಸಾಂಕ್ರಾಮಿಕ ರೋಗಗಳು ಹರಡದಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಹಾಗೂ ಹೆಚ್.ಐ.ವಿ ಮುಂತಾದ ಲೈಂಗಿಕ ರೋಗಗಳಿಗೆ ಆಪ್ತ ಸಲಹೆಯನ್ನು ನೀಡುವ ಮೂಲಕ ಆಶಾ ಕಾರ್ಯಕರ್ತರು, ಆರೋಗ್ಯ ಸೌಲಭ್ಯದಿಂದ ವಂಚಿತರಾದ, ಹಿಂದುಳಿದ ಗ್ರಾಮೀಣ ಪ್ರದೇಶದ ಜನತೆಗೆ ಆರೋಗ್ಯ ಸೇವೆ ಒದಗಿಸಿಕೊಡುವ ಮೂಲಕ , ಸ್ವಸ್ಥ ಸಮಾಜ , ಸ್ವಸ್ಥ ಗ್ರಾಮ , ಆರೋಗ್ಯವಂತ ರಾಷ್ಟ್ರನಿಮರ್ಾಣ ಕಾರ್ಯದಲ್ಲಿ ಆಶಾ ಪಾತ್ರ ಬಹುಮುಖ್ಯವಾದುದು.
ಬಿ. ಶಿವಕುಮಾರ್ ಶಿವ ಸದನ, ಸಿಟಿ ಆಸ್ಪತ್ರೆ ಹತ್ತಿರ ಉಡುಪಿ
No comments:
Post a Comment