Friday, May 31, 2013

TOBACO


ಲೇಖನ.



ಮಾನವ ಕುಲಕ್ಕೆ ಕಂಟಕವಾಗಿರುವ ತಂಬಾಕು ಸೇವನೆ.



ಬಡವ ಶ್ರೀಮಂತ ಮೇಲು ಕೀಳು ಬೇಧವಿಲ್ಲದೇ ಪ್ರತಿ ವರ್ಷ 6 ಮಿಲಿಯನ್ ಜನರನ್ನು ತನ್ನ ನೇರವಾಗಿ ಸಾವಿನ ತೆಕ್ಕೆಗೆ ತೆಗೆದುಕೊಳ್ಳುತ್ತಿರುವ ಮತ್ತು ನೇರ ತಂಬಾಕು ಬಳಸಿದಿದ್ದರೂ ತಂಬಾಕು ಬಳಸುವ ವ್ಯಕ್ತಿಯ ಹೊರಬಿಡುವ ಹೊಗೆಯಿಂದ ಸಮೀಪದಲ್ಲಿರುವ ಸುಮಾರು 6 ಲಕ್ಷ ಮಂದಿ ಪ್ರತಿ ವರ್ಷ ಸಾವೀಗೀಡಾಗುತ್ತಿದ್ದು, ಈ ತಂಬಾಕು ಮಾನವ ಕುಲಕ್ಕೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ.

ತಂಬಾಕು ಎಂದರೆ ಕೇವಲ ಬೀಡಿ,ಸಿಗರೇಟ್ , ಹುಕ್ಕಾ ಸೇವನೆ ಮಾತ್ರ ಆಗಿರದೆ, ಗುಟ್ಕಾ,ಖೈನಿ, ಪಾನ್ ಮಸಾಲ ಮುಂತಾದವುಗಳಲ್ಲಿ ಕೂಡಾ ತಂಬಾಕು ಬಳಸಲಾಗುತ್ತಿದ್ದು, ಈ ಉತ್ಪನ್ನಗಳನ್ನು ಸೇವನೆಯನ್ನು ಪ್ರಚೋದಿಸಲು ಖ್ಯಾತ ಸಿನಿಮಾ ನಟರು, ಆಟಗಾರರನ್ನು ಆಕರ್ಷಕ ಜಾಹೀರಾತುಗಳಲ್ಲಿ ಬಳಸಿಕೊಳ್ಳುತ್ತಿರುವುದರಿಂದ ಅಧಿಕ ಸಂಖ್ಯೆಯ ಜನ ಈ ಚಟಕ್ಕೆ ದಾಸರಾಗುತ್ತಿರುವುದನ್ನು ಮನಗಂಡ ವಿಶ್ವ ಆರೋಗ್ಯ ಸಂಸ್ಥೆಯು 2013 ರ ಮೇ 31 ರಂದು ತಂಬಾಕು ಜಾಹೀರಾತು, ಉತ್ತೇಜನ ಮತ್ತು ಪ್ರಾಯೋಜಕತ್ವ ನಿಷೇಧ (ಃಚಿಟಿ ಣಠಛಠಛಿಠ-ಚಿಜತಜಡಿಣಟಿರ-ಠಿಡಿಠಟಠಣಠಟಿ ಚಿಟಿಜ ಠಿಠಟಿಠಡಿಠಿ) ಎಂಬ ಧ್ಯೇಯವಾಕ್ಯದೊಡನೆ ವಿಶ್ವ ತಂಬಾಕು ನಿಷೇಧ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸುತ್ತಿದೆ.

ವಿಶ್ವ ಆರೋಗ್ಯ ಸಂಸ್ಥೆ ವರದಿಯಂತೆ ವಿಶ್ವದಾದ್ಯಂತ ಶೇ.78 ರಷ್ಟು 13 ರಿಂದ 15 ವರ್ಷದೊಳಗಿನ ಯುವ ಜನತೆ ತಂಬಾಕು ಉತ್ಪನ್ನಗಳ ಕುರಿತ ಜಾಹೀರಾತುಗಳ ಪ್ರಭಾವಕ್ಕೆ ಒಳಗಾಗುತ್ತಿದ್ದು,ಇಂತಹ ಜಾಹೀರಾತುಗಳನ್ನು ಕಡ್ಡಾಯವಾಗಿ ನಿಷೇಧಿಸುವಂತೆ ಹಾಗೂ ಈ ರೀತಿಯ ಜಾಹೀರಾತುಗಳನ್ನು ನಿಷೇಧಿಸಿರುವುದರಿಂದ ವಿಶ್ವದ ತಂಬಾಕು ಪೀಡಿತ ದೇಶಗಳ ನಾಗರೀಕರಲ್ಲಿ ತಂಬಾಕು ಸೇವನೆ ಪ್ರಮಾಣ ಶೇ.7 ರಷ್ಟು ಕಡಿಮೆಯಾಗಿದೆ ಎಂದು ತಿಳಿಸಿದೆ.



ತಂಬಾಕು ಪೀಡಿತರಲ್ಲಿ ಶೇ.80 ರಷ್ಟು ಜನಸಂಖ್ಯೆ ಅಭಿವೃದ್ಧಿ ಶೀಲ ಮತ್ತು ಹಿಂದುಳಿದ ದೇಶಗಳಿಗೆ ಸೇರಿದ್ದು, ಈ ದೇಶಗಲ್ಲಿನ ಬಡ ಜನತೆ ಈ ಚಟಕ್ಕೆ ಬಲಿಯಾಗಿ ತಮ್ಮ ಜೀವನದ ಹೆಚ್ಚಿನ ದುಡಿಮೆಯನ್ನು ತಂಬಾಕಿನಿಂದ ಹರಡುವ ಮಾರಕ ಕಾಯಿಲೆಗಳ ತಮ್ಮ ಚಿಕಿತ್ಸೆಗಳಿಗೆ ವೆಚ್ಚ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ.

ಭಾರತದಲ್ಲಿ 15 ವರ್ಷ ಮೇಲಪಟ್ಟ ಶೇ.30 ರಷ್ಟು ಜನ ತಂಬಾಕಿನ ವಿವಿಧ ಉತ್ಪನ್ನಗಳಿಗೆ ದಾಸರಾಗಿದ್ದು,ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ದೂಮಪಾನಕ್ಕೆ ಹಾಗೂ ಮಹಿಳೆಯರು ಅಗಿಯುವ ರೂಪದ ತಂಬಾಕು ಉತ್ಪನ್ನಗಳನ್ನು ಬಳಸುತ್ತಿದ್ದಾರೆ.

ತಂಬಾಕಿನಲ್ಲಿರುವ ನಿಕೋಟಿನ್ ಅಂಶವು ಹೆರಾಯಿನ್ ಮತ್ತು ಕೊಕೈನ್ ನಲ್ಲಿರುವಂತಹ ಮಾದಕ ಅಂಶಗಳನ್ನು ಓಳಗೊಂಡಿದ್ದು, ಇದನ್ನು ಬಳಸುವ ವ್ಯಕ್ತಿಯು ಮಾನಸಿಕ ಮತ್ತು ದೈಹಿಕವಾಗಿ ಇದಕ್ಕ ದಾಸನಾಗುತ್ತಾನೆ. ತಂಬಾಕಿನಲ್ಲಿ ಸುಮಾರು 4000 ವಿವಿಧ ರಾಸಾಯನಿಕಗಳಿದು ಇವುಗಳಲ್ಲಿ ಸುಮಾರು 60 ರಾಸಾಯನಿಕಗಳು ಬಾಯಿ , ಗಂಟಲು , ಶ್ವಾಸಕೋಶ ಕ್ಯಾನ್ಸರ್ ಮತ್ತು ಪಾರ್ಶವಾಯು ನಂತಹ ಮಾರಕ ಕಾಯಲೆಗಳಿಗಿ ಕಾರಣವಾಗುತ್ತಿದ್ದು, ಭಾರತದಲ್ಲಿ ತಂಬಾಕು ಬಳಕೆಯಿಂದ ಬಾಯಿ ಕ್ಯಾನ್ಸರ್ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದೆ.

ತಂಬಾಕು ವ್ಯಸನವನ್ನು ಬಿಡಿಸಲು ಯಾವುದೇ ಔಷಧಿ ಇಲ್ಲ ಆದರೆ, ಈ ವ್ಯಸನಕ್ಕೆ ಒಳಗಾದ ವ್ಯಕ್ತಿಯು ಮನೋಸ್ಥೆರ್ಯ ಮತ್ತು ಇದರಿಂದ ಹರಡುವ ಕಾಯಿಲೆಗಳ ಕುರಿತು ಅರಿತು ಸ್ವಯಂ ನಿಯಂತ್ರಣದಿಂದ ಇದರಿಂದ ಹೊರಬರಬಹುದಾಗಿದೆ. ಈ ನಿಟ್ಟಿನಲ್ಲಿ ವ್ಯಕ್ತಿಯ ಸಮಾಜ, ಸಮುದಾಯ, ಕುಟುಂಬಗಳು ಅಗತ್ಯ ಮಾನಸಿಕ ನೆರವು ನೀಡುವುದು ಅವಶ್ಯಕವಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಜಗತ್ತಿನಲ್ಲಿ ತಂಬಾಕು ಸೇವನೆಯಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳ ಕುರಿತು ಹಾಗೂ ಇನ್ನು ತಡೆಗಟ್ಟಲು ಅನೆಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಮೇ 31 ರಂದು ನಡೆಯುವ ವಿಶ್ವ ತಂಬಾಕು ರಹಿತ ದಿನಾಚರಣೆಯಲ್ಲಿ ಪಾಲ್ಗೊಂಡು ಪ್ರಸ್ತುತ ತಂಬಾಕು ವ್ಯಸನದಿಂದ ಬಳಲುತ್ತಿರುವ ಜನರಿಗೆ ಇದರಿಂದ ಮುಕ್ತರಾಗುವಂತೆ ಮತ್ತು ತಂಬಾಕು ವ್ಯಸನಕ್ಕೆ ಬಲಿಯಾಗದಂತೆ ತಂಬಾಕಿನ ದುಷ್ಪರಿಣಮಗಳ ಕುರಿತು ಮುಂದಿನ ಪೀಳಿಗೆಗೆ ಅರಿವು ಮೂಡಿಸಿ, ತಂಬಾಕು ರಹಿತ ವಿಶ್ವದ ಗುರಿ ಹೊಂದಿರುವ ವಿಶ್ವಸಂಸ್ಥೆಯ ಕಾರ್ಯಗಳಲ್ಲಿ ಭಾಗಿಯಾಗೋಣ.








































Wednesday, April 24, 2013

Sveep

           

ಲೇಖನ.
 
ಬಲಿಷ್ಠ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಸ್ವೀಪ್ ಯೋಜನೆ.


          ಪ್ರಜಾಪ್ರಭುತ್ವದ ಯಶಸ್ವಿಗೆ ಚುನಾವಣೆ ಅಗತ್ಯ ಹಾಗೆಯೇ ಯಶಸ್ವಿ ಚುನಾವಣೆಗೆ ಮತದಾರರ ಭಾಗವಹಿಸುವಿಕೆ ಅತ್ಯಂತ ಅಗತ್ಯವಾದುದು.
        ಆದರೆ ಇತ್ತೀಚಿನ ಚುನಾವಣೆಗಳಲ್ಲಿ ಮತದಾರರ ಭಾಗವಹಿಸುವಿಕೆಯ ಆಸಕ್ತಿ ಕಡಿಮೆಯಾಗುತ್ತಿದ್ದು, ಮತದಾರರಿಗೆ ಚುನಾವಣೆಯ ಮಹತ್ವ, ಚುನಾವಣೆಯಲ್ಲಿ ಭಾಗವಹಿಸುವಿಕೆಯ ಪ್ರಯೋಜನ, ಉತ್ತಮ ಮತ್ತು ಬಲಿಷ್ಠ ಪ್ರಜಾಪ್ರಭುತ್ವದ ನಿರ್ಮಾಣಕ್ಕೆ ಮತದಾನ ಎಷ್ಟು ಮುಖ್ಯ ಎನ್ನುವ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಭಾರತ ಚುನಾವಣಾ ಆಯೋಗ ಸ್ವೀಪ್ (ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣೆಯಲ್ಲಿ ಭಾಗವಹಿಸುವಿಕೆ ಖಥಿಣಜಟಚಿಣಛಿ ಗಿಠಣಜಡಿ' ಇಜಣಛಿಚಿಣಠಟಿ ಂಟಿಜ ಇಟಜಛಿಣಠಡಿಚಿಟ ಕಚಿಡಿಣಛಿಠಿಚಿಣಠಟಿ) ಎಂಬ ಕಾರ್ಯಕ್ರಮವನ್ನು ಜಾರಿಗೆ ತಂದಿದೆ.
      2009 ರಿಂದ ದೇಶದಲ್ಲಿ ನಡೆದ 12 ರಾಜ್ಯಗಳ ಸಾರ್ವತ್ರಿಕ ಚುನಾವಣೆಯಲ್ಲಿ ಈ ಯೋಜನೆಯ ಮೂಲಕ ಮತದಾನದ ಹೆಚ್ಚಳಕ್ಕೆ ಚುನಾವಣಾ ಆಯೋಗ ಶ್ರಮಿಸಿದೆ. ಅದರಂತೆ ತಮಿಳುನಾಡಿನಲ್ಲಿ ನಡೆದ ಚುನಾವಣೆಯಲ್ಲಿ ಈ ಯೋಜನೆಯಿಂದ ಅಲ್ಲಿನ ಚುನಾವಣೆಯಲ್ಲಿ ಮತದಾರರ ಭಾಗವಹಿಸುವಿಕೆಯ ಪ್ರಮಾಣ ಶೇ.70.82 ರಿಂದ 78.01 ಪ್ರಮಾಣಕ್ಕೆ ಹೆಚ್ಚಳವಾಗಿದೆ. ಉಳಿದಂತೆ ಉತ್ತರಖಂಡದಲ್ಲಿ ಶೇ.59.45 ರಿಂದ 66.17 , ಉತ್ತರ ಪ್ರಧೇಶದಲ್ಲಿ ಶೇ.45.96 ರಿಂದ 59.40 , ಗೋವಾದಲ್ಲಿ ಶೇ.70.51 ರಿಂದ 81.73 ರಷ್ಟು ಹೆಚ್ಚಳವಾಗಿದೆ.ಹಾಗೂ ಈ ಎಲ್ಲಾ ರಾಜ್ಯಗಳಲ್ಲೂ ಮಹಿಳಾ ಮತದಾರರ  ಮತ್ತು ಯುವ ಜನತೆ ಮತ್ತು ನಗರ ಪ್ರದೇಶದ ಮತದಾರರ ಭಾಗವಹಿಸುವಿಕೆಯ ಪ್ರಮಾಣದಲ್ಲಿ ಗಮನಾರ್ಹ ಏರಿಕೆಯಾಗಿದೆ.
         ಪ್ರತಿ ಮತದಾರನೂ ಯಾವುದೇ ಆಮಿಷ, ಒತ್ತಡಗಳಿಗೆ ಒಳಗಾಗದೇ ನಿಭರ್ೀತಿಯಿಂದ ಮತದಾನ ಕೇಂದ್ರಗಳಿಗೆ ಬಂದು ಮತ ಚಲಾಯಿಸಲು ಅನುಕೂಲವಾಗುವಂತೆ ಸ್ವೀಪ್ ಯೋಜನೆಯ ಮೂಲಕ ಹೆಚ್ಚಿನ ಪ್ರಚಾರ ನೀಡಲಾಗುತ್ತಿದೆ.
ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ವಿಧಾನ ಸಭಾ ಚುನಾವಣೆಯಲ್ಲಿ ಸ್ವೀಪ್ ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾದಿಕಾರಿಗಳ ಅಧ್ಯಕ್ಷತೆಯಲ್ಲಿ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳ ಸಮಿತಿಯನ್ನು ರಚಿಸಿದ್ದು, ಸ್ವೀಪ್ ಪ್ರಚಾರಕ್ಕಾಗಿ ಪ್ರತಿ ಜಿಲ್ಲೆಗ ರೂ.2.5 ಲಕ್ಷಗಳನ್ನು ಬಿಡುಗಡೆ ಮಾಡಿದ್ದು, ಈ ಅನುದಾನದಲ್ಲಿ ಮತದಾನದ ಜಾಗೃತಿ ಕುರಿತ ಬ್ಯಾನರ್ ಗಳು, ಪೋಸ್ಟರ್ ಗಳು , ಫ್ಲೆಕ್ಸ್ ಗಳು , ಬೀದಿ ನಾಟಕಗಳು ಮುಂತಾದ  ಪ್ರಚಾರ ಕಾರ್ಯಕ್ರಮಗಳ ಮೂಲಕ ಮತಯಂತ್ರಗಳ ಬಳಕೆ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಬದಲಾವಣೆ ಹಾಗೂ ಮತದಾನದ ಮಹತ್ವನ್ನು ಮತದಾರರಿಗೆ ತಲುಪಿಸುವಂತೆ ಸೂಚಿಸಿದೆ.
            ಈ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ 30 ಕೋಟಿ ಮತದಾರರು ಮತದಾನ ಪ್ರಕ್ರಿಯೆಯಿಂದ ದೂರ ಉಳಿದಿದ್ದು ಅದರಲ್ಲಿ ಹೆಚ್ಚಿನ ಸಂಖ್ಯೆಯ ಯುವ ಜನತೆ ಹಾಗೂ ನಗರ ಪ್ರದೇಶದ ಜನತೆ ಇದ್ದು,ಅದಕ್ಕಾಗಿ ಯುವಜನತೆ ಮತ್ತು ನಗರ ಪ್ರದೇಶದ ಜನತೆಯನ್ನು ಗುರಿಯಾಗಿಟ್ಟುಕೊಂಡು , ಪ್ಯಾರಾ ಗ್ಲೈಡರ್ ಮೂಲಕ ಕರಪತ್ರ ಹಂಚಿಕೆ  , ಮೊಬೈಲ್ ಎಸ್.ಎಂ.ಎಸ್ ಮೂಲಕ  ಕಾಲೇಜು ವಿದ್ಯಾಸಂಸ್ಥೆಗಳು, ಯುವ ಜನ ಒಕ್ಕೂಟಗಳು , ಕೈಗಾರಿಕೆಗಳಲ್ಲಿ ದುಡಿಯುತ್ತಿರುವ ಯುವ ಜನತೆ ಮತ್ತು ನಗರ ಪ್ರದೇಶದ ಜನತೆಗೆ ಮತದಾನದ ಸಂದೇಶವನ್ನು ತಲುಪಿಸಲು ಹಾಗೂ ಅಂಚೆ ಕಛೇರಿಗಳು, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮತದಾನ ಸಂದೇಶದ ಬ್ಯಾನರ್ ಗಳನ್ನು ಪ್ರದಶರ್ಿಸುವ  ಹಾಗೂ ಸ್ತ್ರೀಶಕ್ತಿ ಗುಂಪುಗಳು, ಅಂಗನವಾಡಿ ಸಹಾಯಕಿಯರ ಮೂಲಕ ಮನೆ ಮನಗೆ ಕರಪತ್ರಗಳನ್ನು ವಿತರಿಸುವುದರ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತದಾನ ಮಾಡುವಂತೆ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
           ಅಲ್ಲದೇ ಶಾಲಾ ಮಕ್ಕಳಿಗೆ ತಮ್ಮ ಕುಟುಂಬದ ಸದಸ್ಯರಿಂದ ಮತದಾನ ಮಾಡಿಸುವ ಕುರಿತ ಪ್ರತಿಜ್ಞಾ ವಿದಿ ಸ್ವೀಕಾರ, ಹಿಂದುಳಿದ ವರ್ಗದ ಜನತೆ , ಸಮುದಾಯಗಳು ವಾಸಿಸುವ ಸ್ಥಳದಲ್ಲಿ ವಿಶೇಷ ಪ್ರಚಾರ ಹಾಗೂ ಈ ಹಿಂದೆ ನಡೆದ ಚುನಾವಣೆಯಲ್ಲಿ ಕನಿಷ್ಠ ಮತದಾನ ನಡೆದ , ಮತದಾನ ಬಹಿಷ್ಕರಿಸಿದ, ಮತ್ತು ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿ ಆ ಬಾಗದ ಜನತೆಗೆ ಮತದಾನದಲ್ಲಿ ಭಾಗವಹಿಸುವಂತೆ ಧೈರ್ಯ ತುಂಬುವ ಮೂಲಕ ನಿಭರ್ೀತಿಯಿಂದ  ಮತದಾನ ಮಾಡುವಂತೆ ಮನವೊಲಿಸಲು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ.
        ವಿಶೇಷವಾಗಿ ಮತದಾನ ಪ್ರಕ್ರಿಯೆಯಲ್ಲಿ ತೊಡಗುವ ಸರಕಾರಿ  ಸಿಬ್ಬಂದಿಗಳಲ್ಲಿ ಶೇ.50 ಮಂದಿ ಪ್ರತಿ ಚುನಾವಣೆಯಲ್ಲಿ ತಮ್ಮ ಮತದಾನದಿಂದ ವಂಚಿತರಾಗುತ್ತಿದು, ಈ ಬಾರಿ ಶೇ.100 ರಷ್ಟು ಸಿಬ್ಬಂದಿಗಳು ಮತದಾನ ಮಾಡುವಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. 
         ಬಲಿಷ್ಠ ಪ್ರಜಾಪ್ರಭುತ್ವದ ನಿರ್ಮಾಣಕ್ಕೆ ಪಣ ತೊಟ್ಟಿರುವ ಭಾರತೀಯ ಚುನಾವಣಾ ಆಯೋಗ ಎಲ್ಲಾ ಪ್ರಜೆಗಳೂ ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲು ರೂಪಿಸಿರುವ ಈ ಕಾರ್ಯಕ್ರಮದಲ್ಲಿ ನಾವೆಲ್ಲರೂ ತಪ್ಪದೇ ಭಾಗವಹಿಸಿ ಬಲಿಷ್ಠ ಪ್ರಜಾಪ್ರಭುತ್ವ ನಿರ್ಮಾಣದಲ್ಲಿ ಭಾಗಿಯಾಗೋಣ ಮತ್ತು ಉತ್ತಮ ಸರಕಾರದ ರಚನೆಗೆ ಕೈಜೋಡಿಸೂಣ. 

                                                                                               ಬಿ.ಶಿವಕುಮಾರ್
                                                                                         ವಾರ್ತಾ ಇಲಾಖೆ, ಉಡುಪಿ
                                                                                              date-24-4-2013



Wednesday, April 7, 2010

ವೋಲ್ವೋ ಬಸ್ : ಲೇಖನ

ಇಂದಬಿ.ಶಿವಕುಮಾರ್ಶಿವ ಸದನ , ಸಿಟಿ ಆಸ್ಪತ್ರೆ ಹತಿರಉಡುಪಿ. ಮೊ: 9964141590
ದಯವಿಟ್ಟು ಈ ಲೇಖನವನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಬೇಕೆಂದು ಕೋರುತ್ತೇನೆ.
ಲೇಖನ :
ಸಾಕಾರಗೊಂಡ ಕಾತುರ ,ನಿರೀಕ್ಷೆ---ಅವಿಭಜಿತ ದ.ಕ. ಜಿಲ್ಲೆಗೆ ಸಕರ್ಾರಿ ವೋಲ್ವೋ ಸಾರಿಗೆ.
ಅವಿಭಜಿತ ದ. ಕನ್ನಡ ಜಿಲ್ಲೆಯಲ್ಲಿ (ಮಂಗಳೂರು-ಉಡುಪಿ ಜಿಲ್ಲೆ) ಯ ಸಾರಿಗೆ ವ್ಯವಸ್ಥೆಯಲ್ಲಿ ಖಾಸಗಿ ವಾಹನಗಳ ಪಾಲು ಹೆಚ್ಚು. ಖಾಸಗಿ ವಾಹನ ವ್ಯವಸ್ಥೆಯಲ್ಲಿನ ಸಮಸ್ಯೆಗಳಿಗೆ ಬೇಸೆತ್ತ ಉಭಯ ಜಿಲ್ಲೆಗಳ ನಾಗರೀಕರು ಮತ್ತು ಜನಪ್ರತಿನಿದಿಗಳು ಸಕರ್ಾರಿ ಸಾರಿಗೆ ಸೌಕರ್ಯ ಒದಗಿಸುವಂತೆ ಸರಕಾರಕ್ಕೆ ಹಲವು ಬಾರಿ ಒತ್ತಡ ಮತ್ತು ಮನವಿ ಮಾಡಿದ್ದು ಈಗ ಫಲಿಸಿದೆ. ಪ್ರಸ್ತುತ ಸಕರ್ಾರ ನಾಗರೀಕರ ಬೇಡಿಕೆಗೆ ಸ್ಪಂದಿಸಿ , ಮಣಿಪಾಲ- ಮಂಗಳೂರು ನಡುವೆ ಹವಾ ನಿಯಂತ್ರಿತ ಸುಖಾಸೀನ ವೋಲ್ವೋ ಪ್ರಯಾಣವನ್ನು ಪ್ರಾರಂಭಿಸಿದೆ. ಈ ಬಸ್ಸುಗಳು ಪ್ರತಿದಿನ ಬೆಳಗ್ಗೆ 7.30 ರಿಂದ ಸಂಜೆ 6.30 ರ ವರೆಗೆ ಪ್ರತಿ ಗಂಟೆಗೊಂದು, ಮಂಗಳೂರು ಮತ್ತು ಮಣಿಪಾಲದಿಂದ ಹೊರಡಲಿದೆ. ಸ್ವೀಡನ್ ನಿಂದ ಆಮದು ಮಾಡಲಾಗಿರುವ ಈ ಬಸ್ ನಲ್ಲಿ 38 ಸೀಟುಗಳಿದ್ದು, ಎಫ್.ಎಂ. ಮತ್ತು ಡಿವಿಡಿ(ಆಡಿಯೋ ಮಾತ್ರ)) ವ್ಯವಸ್ಥೆಯಿದೆ. ಈ ವಾಹನದಲ್ಲಿ ಮಂಗಳೂರಿನಿಂದ ಮಣಿಪಾಲಕ್ಕೆ ಪ್ರಯಾಣ ದರ ರೂ.60.00 ಆಗಿದ್ದು, ಮಂಗಳೂರು ಮಣಿಪಾಲದ ಮಧ್ಯೆ ಹವಾನಿಯಂತ್ರಿತ ಕಾರುಗಳಲ್ಲಿ ಓಡಾಡುವವರು ಇನ್ನು ಮುಂದೆ ತಮ್ಮ ಕಾರುಗಳನ್ನು ಬಿಟ್ಟು ಈ ಬಸ್ಸುಗಳಲ್ಲಿ ಓಡಾಡಬಹುದು. ಅವರಿಗೆ ಹವಾ ನಿಯಂತ್ರಿತ ಕಾರುಗಳಲ್ಲಿ ತಗಲುವ ವೆಚ್ಚಕ್ಕಿಂತ ಈ ಪ್ರಯಾಣ ದರ ತುಂಬಾ ಅಗ್ಗವಾಗುತ್ತದೆ. ಮಣಿಪಾಲದಿಂದ ನಿಗಧಿತ ಪ್ರಮುಖ ಸ್ಥಳಗಳಾದ ಉಡುಪಿ, ಪಡುಬಿದ್ರಿ, ಮೂಲ್ಕಿ, ಸುರತ್ಕಲ್ ಗಳಲ್ಲಿ ನಿಲುಗಡೆ ಹೊಂದಿರುವ ಈ ವಾಹನ ಉಭಯ ಜಿಲ್ಲೆಗಳ ನಾಗರೀಕರಿಗೆ ಅತ್ಯಂತ ಅನುಕೂಲವಾಗಿದ್ದು, ಈ ಬಸ್ ಪ್ರಯಾಣ ಆರಂಭವಾದ ದಿನ ಪ್ರತಿ ಟ್ರಿಪ್ ನಲ್ಲಿ ಸಂಪೂರ್ಣ ಸೀಟುಗಳು ಭತರ್ಿಯಾಗಿ , ಜನ ನಿಂತುಕೊಂಡೇ ಪ್ರಯಾಣ ಮಾಡಿದ್ದು,ಕ.ರಾ.ರ.ಸಾ. ನಿಗಮಕ್ಕೆ ನಿರೀಕ್ಷೆಗೂ ಮಿಗಿಲಾಗಿ ಆದಾಯ ಬಂದಿದ್ದು, ನಾಗರೀಕರ ಬೇಡಿಕೆಯಂತೆ ಮರುದಿನದಿಂದ ಹೆಚ್ಚುವರಿಯಾಗಿ 2 ಬಸ್ ಗಳನ್ನು ಓಡಿಸಲಾಗುತ್ತಿದ್ದು, ನಾಗರೀಕರು ಈ ಸಕರ್ಾರಿ ಸಾರಿಗೆ ವ್ಯವಸ್ಥೆಗಾಗಿ ಎಷ್ಟು ಕಾತುರದಿಂದ ಕಾಯುತ್ತಿದ್ದರು ಎಂಬುದನ್ನು ಅರಿಯಬಹುದಾಗಿದೆ. ಮಾಚರ್್ 27 , 2010 ರಂದು ಮಣಿಪಾಲದಲ್ಲಿ ಈ ಬಸ್ ಸಂಚಾರಕ್ಕೆ ರಾಜ್ಯ ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ವಿ.ಎಸ್. ಆಚಾರ್ಯ ರವರು ಹಸಿರು ನಿಶಾನೆ ತೋರಿಸಿ ಉದ್ಗಾಟಿಸಿದ್ದು, ಮಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ. ಕೃಷ್ಣ ಪಾಲೇಮಾರ್ ರವರು ಬಸ್ ಸಂಚಾರಕ್ಕೆ ಚಾಲನೆ ನೀಡಿದರು. ಉದ್ಘಾಟನೆ ನಂತರ ಮಾತನಾಡಿದ ಡಾ ವಿ.ಎಸ್. ಆಚಾರ್ಯ ರವರು ಉಡುಪಿ- ಮಂಗಳೂರು ನಡುವಿನ ವೋಲ್ವೋ ಬಸ್ ಓಡಾಟ ಇದೊಂದು ಐತಿಹಾಸಿಕ ಕ್ರಮವಾಗಿದ್ದು , ಸಕರ್ಾರಿ ಬಸ್ ಗಳ ಸೇವೆ ಮತ್ತು ಗುಣಮಟ್ಟವನ್ನು ನೋಡಿ , ಖಾಸಗಿಯವರು ಅದನ್ನು ಅಳವಡಿಸಿಕೊಂಡು ಆರೋಗ್ಯಕರ ಸ್ಪಧರ್ೆ ನಡೆಸಬೇಕು ಎಂದು ಖಾಸಗಿ ಬಸ್ ಮಾಲೀಕರಿಗೆ ಕರೆ ನೀಡಿದರು. ಒಟ್ಟಿನಲ್ಲಿ ಅವಿಭಜಿತ ಜಿಲ್ಲೆಯ ಜನರ ಬಹುದಿನಗಳ ನಿರೀಕ್ಷೆ , ಕಾತುರ ಈಗ ಸಾಕಾರಗೊಂಡಿದೆ.

ಪ್ರಚಾರ ಯಂತ್ರ : ಲೇಖನ

ಇಂದಬಿ.ಶಿವಕುಮಾರ್ಶಿವ ಸದನ , ಸಿಟಿ ಆಸ್ಪತ್ರೆ ಹತಿರಉಡುಪಿ. ಮೊ: 9964141590
ದಯವಿಟ್ಟು ಈ ಲೇಖನವನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಬೇಕೆಂದು ಕೋರುತ್ತೇನೆ.
ಲೇಖನ :
ಸಕರ್ಾರದ ಅಭಿವೃದ್ದಿ ಕಾರ್ಯಕ್ರಮಗಳ ಪ್ರಚಾರಕ್ಕೆ ಮಲ್ಟಿ ಸ್ಕ್ರೋಲಿಂಗ್ ಪ್ರಚಾರ ಯಂತ್ರ.
ಸಕರ್ಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಚಾರ ಪಡಿಸುವ ಪ್ರಮುಖ ಕರ್ತವ್ಯ ವಾತರ್ಾ ಇಲಾಖೆಯದ್ದು. ಈ ಇಲಾಖೆಯು ಸಕರ್ಾರದ ಸಾರ್ವಜನಿಕ ಸಂಪರ್ಕ ಇಲಾಖೆಯಾಗಿದ್ದು, ಸಕರ್ಾರದ ಅಭಿವೃದ್ಧಿ ಯೋಜನೆಗಳು, ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡುವ ಕಾರ್ಯವನ್ನು ಮಾಡುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಸಕರ್ಾರದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ವಸ್ತು ಪ್ರದರ್ಶನ, ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಬೀದಿ ನಾಟಕಗಳ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಅಲ್ಲದೇ ರಾಜ್ಯದ ಪ್ರಮುಖ ಉತ್ಸವ ಮತ್ತು ಜಾತ್ರೆಗಳ ಸಂದರ್ಭದಲ್ಲಿ ಲೇಸರ್ ಪ್ರದರ್ಶನದ ಮೂಲಕ ವಿನೂತನವಾಗಿ ಸಕರ್ಾರದ ಅಬಿವೃದ್ಧಿ ಕಾರ್ಯಕ್ರಮಗಳನ್ನು ಪ್ರಚುರಪಡಿಸಲಾಗುತ್ತಿದೆ. ಮಲ್ಟಿ ಸ್ಕ್ರೋಲಿಂಗ್ ಪ್ರಚಾರ ಯಂತ್ರ : ಪ್ರಸ್ತುತ ವಾತರ್ಾ ಇಲಾಖೆಯು ಸಕರ್ಾರವು ರಾಜ್ಯದ ವಿವಿಧ ವರ್ಗಗಳ ಜನತೆಗೆ ರೂಪಿಸಿರುವ ಜನಪರ ಕಾರ್ಯಕ್ರಮಗಳ ಸಂಕ್ಷಿಪ್ತ ಮಾಹಿತಿ ನೀಡುವಿಕೆಯನ್ನು ನೂತನ ಮಲ್ಟಿ ಸ್ಕ್ರೋಲ್ ಡಿಸ್ಪ್ಲೇ ಯಂತ್ರಗಳನ್ನು ಮೂಲಕ ಮಾಡುತ್ತಿದೆ . ಈ ಪ್ರಚಾರ ಯಂತ್ರದಲ್ಲಿ, ಸಕರ್ಾರದ ಅಬಿವೃದ್ಧಿ ಕಾರ್ಯಕ್ರಮಗಳಾದ , ಸಾರ್ವಜನಿಕರಿಗೆ ಮಾಹಿತಿ ಹಕ್ಕಿನ ಮಹತ್ವವನ್ನು ತಿಳಿಸುವ "ಮಾಹಿತಿ ಹಕ್ಕು", ರೈತರ ಜೀವನಮಟ್ಟ ಸುಧಾರಣೆಯ "ಹಳ್ಳಿ ಬಾಳು ಹಸನು" , ಅಲ್ಪ ಸಂಖ್ಯಾತರ ಅಬಿವೃದ್ಧಿಗಾಗಿ ಸಕರ್ಾರ ಕೈಗೊಂಡಿರುವ ಕ್ರಮಗಳ ವಿವರವನ್ನು ತಿಳಿಸುವ "ಅಲ್ಪ ಸಂಖ್ಯಾತರ ಆಶಾ ಕಿರಣ" ಎಸ್.ಎಸ್.ಎಲ್.ಸಿ. ಯಲ್ಲಿ ಶೇ 75 ರಷ್ಟು ಅಂಕ ಪಡೆದಿರುವ ಹಿಂದುಳಿದ ವರ್ಗಗಳ ವಿಧ್ಯಾಥರ್ಿಗಳಿಗೆ ವಿಧ್ಯಾಥರ್ಿ ವೇತನ ನೀಡುವ ಯೋಜನೆಯ ವಿವರವನ್ನು ತಿಳಿಸುವ "ಸಾಮಾಜಿಕ ಕಳಕಳಿ" ನೆರೆ ಹಾವಳಿಯಿಂದ ಹಾನಿಗೊಳಗಾದ 316 ಹಳ್ಳಿಗಳನ್ನು ಸ್ಥಳಾಂತರಿಸುವ ಕಾರ್ಯಕ್ರಮದ ವಿವರವನ್ನು ತಿಳಿಸುವ "ಆಸರೆ ಶಾಶ್ವತ ಸೂರು " ಎಂಬ ಶೀಷರ್ಿಕೆ ಹಾಗೂ ವಿವರಗಳನ್ನು ಒಳಗೂಂಡ ಹಲವು ಜಾರು ಫಲಕಗಳನ್ನು ಅಳವಡಿಸಲಾಗಿದೆ. ಈ ಫಲಕಗಳ ಹಿಂದೆ ವಿದ್ಯುತ್ ದೀಪವನ್ನು ಅಳವಡಿಸಲಾಗಿದ್ದು, ಅದರ ಮುಂದೆ ಸೌಲಭ್ಯ ವಿವರಣೆಯ ಫಲಕವಿದ್ದು, ಜನತೆಗೆ ಪ್ರತಿ ಫಲಕದಲ್ಲಿರುವ ವಿವರಗಳನ್ನು ಸಾವಕಾಶವಾಗಿ ಓದಲು ಅನುಕೂಲವಾಗುವಂತೆ ಪ್ರತಿ 20 ಸೆಕೆಂಡಿಗೆ ಒಂದು ಜಾರು ಫಲಕ ಬದಲಾಗುತ್ತದೆ. ಹೀಗೆ ಹಲವು ಯೋಜನೆಗಳ ಕುರಿತು ಈ ಯಂತ್ರ ವಿವರ ನೀಡುತ್ತದೆ . ನೋಡಲು ಆಕರ್ಷಕವಾದ ಹಾಗೂ ಯೋಜನೆಗಳ ಕುರಿತು ಸೂಕ್ತ ಮಾಹಿತಿ ನೀಡುವ ಈ ಸ್ಕ್ರೋಲಿಂಗ್ ಪ್ರಚಾರ ಯಂತ್ರಗಳನ್ನು ರಾಜ್ಯಾದ್ಯಂತ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ ವಾತರ್ಾ ಇಲಾಖೆ ಸ್ಥಾಪಿಸಿದ್ದು, ಜಿಲ್ಲಾಧಿಕಾರಿಗಳ ಕಛೇರಿಗೆ ಭೇಟಿ ನೀಡುವ ಸಾರ್ವಜನಿಕರು ಈ ಯಂತ್ರದ ಮೂಲಕ ಸಕರ್ಾರದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಅರಿವು ಪಡೆಯಬಹುದಾಗಿದೆ.

ಮೊಬೈಲ್ ಪಂಚಾಯತ್ : ಲೇಖನ

ಇಂದಬಿ.ಶಿವಕುಮಾರ್ಶಿವ ಸದನ , ಸಿಟಿ ಆಸ್ಪತ್ರೆ ಹತಿರಉಡುಪಿ.ದಯವಿಟ್ಟು ಈ ಲೇಖನವನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಬೇಕೆಂದು ಕೋರುತ್ತೇನೆ.
ಲೇಖನ :
ಪಂಚಾಯತ್ ವ್ಯವಸ್ಥೆ ಅಬಿವೃದ್ಧಿಗಾಗಿ ಮೊಬೈಲ್ ಸಂಪರ್ಕ.
ನಿಮ್ಮ ಗ್ರಾಮದಲ್ಲಿ ಸಮಸ್ಯೆಗಳ ಕುರಿತು ಸಂಬಂದಪಟ್ಟ ಗ್ರಾಮ ಪಂಚಾಯತ್ ಅಥವಾ ಜಿಲ್ಲಾ ಪಂಚಾಯತ್ ನಲ್ಲಿ ನಲ್ಲಿ ದೂರು ನೀಡಲು ಹೋಗಿದ್ದು, ಅಲ್ಲಿ ಸಂಬಂದಪಟ್ಟ ಅಧಿಕಾರಿಗಳು ಇರದೇ, ಹಲವು ಬಾರಿ ಕಛೇರಿಗೆ ಅಲೆದಾಡಿ ಸುಸ್ತಾಗಿದ್ದೀರಾ, ಸಂಬಂದಪಟ್ಟ ಅಧಿಕಾರಿ ಎಲ್ಲಿಗೆ ತೆರಳಿದ್ದಾರೆ , ಯಾವಾಗ ಬರುತ್ತಾರೆ , ನಿಮಗೆ ಸಿಗುವರೇ, ಅವರನ್ನು ಸಂಪಕರ್ಿಸಲು ಅವರ ಯಾವುದೇ ವೈಯಕ್ತಿಕ ಮೊಬೈಲ್ ಸಂ.ಇಲ್ಲದೇ ಪರದಾಡುತ್ತಿದ್ದೀರಾ , ನಿಮ್ಮ ಈ ಎಲ್ಲ ಸಮಸ್ಯೆಗಳಿಗೆ ಈಗ ಪರಿಹಾರ ಇದೆ. ಪ್ರಸ್ತುತ ಸಕರ್ಾರವು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿಯಲ್ಲಿರುವ , ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳಿಗೆ ಸಕರ್ಾರಿ ಸ್ವಾಮ್ಯದ ಬಿ.ಎಸ್.ಎನ್. ಎಲ್. ಸಂಸ್ಥೆಯ ಸಿ.ಯು.ಜಿ(ಕ್ಲೋಸ್ ಯೂಸರ್ ಗ್ರೂಪ್) ನೆಟ್ ವಕರ್್ನಡಿಯಲ್ಲಿ ಮೊಬೈಲ್ ದೂರವಾಣಿ ಸಂಪರ್ಕ ನೀಡಿದೆ. ಈ ನೆಟ್ವಕ್ರ್ ಮೂಲಕ ದೂರವಾಣಿ ಸಂಪರ್ಕ ಹೊಂದಿರುವ ಅಧಿಕಾರಿಗಳು ತಮ್ಮ ತಮ್ಮಲ್ಲಿ ವಿಚಾರ ವಿನಿಮಯ ಮಾಡಲು ಯಾವುದೇ ಮೊತ್ತವನ್ನು ನೀಡಬೇಕಾಗಿಲ್ಲ. ಆದರೆ ಮಾಸಿಕ ನಿದರ್ಿಷ್ಟ ಮೊತ್ತವನ್ನು ಮಾತ್ರ ಪಾವತಿಸಬೇಕಾಗಿರುತ್ತದೆ. ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿರುತ್ತಿರುವ ಜಿಲ್ಲಾ ಮತ್ತು ತಾಲೂಕು ಅಧಿಕಾರಿಗಳಿಗೆ ಪ್ಲಾನ್ 499 ಮತ್ತು ಗ್ರಾಮ ಪಂಚಾಯತ್ ಮತ್ತು ಹೋಬಳಿ ಮಟ್ಟದ ಅಧಿಕಾರಿಗಳಿಗೆ ಪ್ಲಾನ್ ನಂ.199 ಎಂಬ ಯೋಜನೆಗಳ ಮೂಲಕ ಮೊಬೈಲ್ ಸಂಪರ್ಕ ನೀಡಲಾಗಿದೆ. ಈ ಸಂಪರ್ಕಗಳನ್ನು ಹೊಂದಿರುವ ಅಧಿಕಾರಿ ಸಿ.ಯು.ಜಿ. ಅಡಿಯಲ್ಲಿರುವ ರಾಜ್ಯದ ಯಾವುದೇ ಅಧಿಕಾರಿಯೊಂದಿಗೆ ಯಾವುದೇ ಶುಲ್ಕವಿಲ್ಲದೇ ಮಾತನಾಡಬಹುದಾಗಿದ್ದು, ಸಿ.ಯು.ಜಿ. ಯಲ್ಲಿ ಸೇರದ ದೂರವಾಣಿ ಸಂಪರ್ಕದೊಂದಿಗೆ ಮಾತನಾಡಬೇಕಾಗಿದ್ದಲ್ಲಿ ಪ್ಲಾನ್ 499 ಹೊಂದಿರುವವರು 750 ನಿಮಿಷಗಳು (ಪಲ್ಸ್ ದರ 15 ಸೆಕೆಂಡ್) ಮತ್ತು ಪ್ಲಾನ್ ನಂ.199 ಹೊಂದಿರುವವರು 100 ನಿಮಿಷಗಳು (ಪಲ್ಸ್ ದರ 60 ಸೆಕೆಂಡ್) ಯಾವುದೇ ಶುಲ್ಕವಿಲ್ಲದೇ ಬಳಸಬಹುದಾಗಿದೆ. ಹಾಗೂ ಈ ಅಧಿಕಾರಿಗಳಿಗೆ ಅವರುಗಳು ಹೊಂದಿರುವ ಪ್ಲಾನ್ ಗಳಗೆ ಕ್ರಮವಾಗಿ ರೂ.750.00 ಮತ್ತು ರೂ.250.00 ರೂ. ಗಳ ದೂರವಾಣಿ ಭತ್ಯೆಯನ್ನು ನಿಗಧಿಪಡಿಸಿದೆ. ಒಂದು ವೇಳೆ ಉಚಿತವಾಗಿ ನೀಡಲಾಗಿರುವ ಅವಧಿಯನ್ನು ಮೀರಿ ಹೆಚ್ಚುವರಿ ದೂರವಾಣಿ ಬಳಕೆ ಮಾಡಿದಲ್ಲಿ , ಹೆಚ್ಚುವರಿಯಾಗಿ ಬಳಕೆ ಮಾಡಿದ ಅವಧಿಯ ವೆಚ್ಚವನ್ನು ಸಂಬಂದಪಟ್ಟ ಅಧಿಕಾರಿಗಳೇ ನೇರವಾಗಿ ಬಿ.ಎಸ್.ಎನ್.ಎಲ್. ಗೆ ಪಾವತಿಸಬೇಕಾಗಿರುತ್ತದೆ. ಈ ದೂರವಾಣಿ ಸಂಪರ್ಕ ಕಲ್ಪಿಸಿರುವ ಅಧಿಕಾರಿ , ಈ ದೂರವಾಣಿಯಲ್ಲಿ ಯಾವುದೇ ಸಮಯದಲ್ಲಿ ಸ್ವಿಚ್ ಆಫ್ ಮಾಡುವಂತಿಲ್ಲ ಮತ್ತು ದಿನದ 24 ಗಂಟೆಯೂ ಸಹ ಚಾಲ್ತಿಯಲ್ಲಿಟ್ಟಿರಬೇಕು. ಇದರಿಂದಾಗಿ ತುತರ್ು ಸಮಯದಲ್ಲಿ ಸದರಿ ಅಧಿಕಾರಿಗಳನ್ನು ಸಂಪಕರ್ಿಸಲು ಸಾಧ್ಯವಾಗುತ್ತದೆ. ಒಂದು ವೇಳೆ ವಗರ್ಾವಣೆಯಾಗಿ ತೆರಳಬೇಕಾದಲ್ಲಿ , ಅವರು ಆ ತಿಂಗಳಿನವರೆಗಿನ ಬಿಲ್ ಪಾವತಿಸಿ, ಸಿಮ್ ನ್ನು ಪ್ರಬಾರ ವಹಿಸಿಕೊಳ್ಳುವ ಅಧಿಕಾರಿಗೆ ಹಸ್ತಾಂತರಿಸಬೇಕಾಗಿರುತ್ತದೆ. ಉಡುಪಿ ಜಿಲ್ಲೆಯಲ್ಲಿ, ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿರುವ 146 ಗ್ರಾಮ ಪಂಚಾಯತ್ ಕಾರ್ಯದಶರ್ಿಗಳಿಗೆ, 15 ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ , 15 ತಾಲೂಕು ಪಂಚಾಯತ್ ಅಧಿಕಾರಿಗಳಿಗೆ ಹಾಗೂ 27 ಮಂದಿ ಇಂಜಿನಿಯರ್ ಗಳು ಸೇರಿದಂತೆ ಒಟ್ಟು 203 ಮಂದಿಗೆ ಸಿ.ಯು.ಜಿ(ಕ್ಲೋಸ್ ಯೂಸರ್ ಗ್ರೂಪ್) ನೆಟ್ ವಕರ್್ ನಡಿಯಲ್ಲಿ ಸಿಮ್ ಕಾಡ್ರ್ ಗಳನ್ನು ವಿತರಿಸಲಾಗಿದೆ.

ಗಣೇಶ್ ಗಂಗೊಳ್ಳಿ : ಲೇಖನ

ಇಂದಬಿ.ಶಿವಕುಮಾರ್ಶಿವ ಸದನ , ಸಿಟಿ ಆಸ್ಪತ್ರೆ ಹತಿರಉಡುಪಿ.ದಯವಿಟ್ಟು ಈ ಲೇಖನವನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಬೇಕೆಂದು ಕೋರುತ್ತೇನೆ.
ಲೇಖನ :
ಸರಳತೆಯ ಗಾಯನ ಕಲಾವಿದ - ಗಣೇಶ್ ಕುಮಾರ್ ಗಂಗೊಳ್ಳಿ
ಸುಗಮ ಸಂಗೀತವೇ ಆಗಲಿ, ಜಾನಪದ ಸಂಗೀತವೆ ಆಗಲಿ, ಯಾವುದಕ್ಕೂ ಸೈ. ಎರಡರಲ್ಲೂ ಸಂಪೂರ್ಣ ಭಾವಪರವಶರಾಗಿ ಹಾಡುವ ಗ್ರಾಮೀಣ ಪ್ರದೇಶದ ಕಲಾವಿದ ಗಣೇಶ್ ಕುಮಾರ್ ಗಂಗೊಳ್ಳಿ ರವರಿಗೆ ಸಂಗೀತವೇ ಜೀವನ , ವೃತ್ತಿ , ಪ್ರವೃತ್ತಿ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಮೇಲ್ ಗಂಗೋಳ್ಳಿಯಲ್ಲಿ ಶ್ರೀಮತಿ. ಚಂದು ಮತ್ತು ದಿವಂಗತ ನಾರಾಯಣ ರವರ ಹಿರಿಯ ಪುತ್ರರಾಗಿ ಜನಿಸಿದ ಶ್ರೀಯುತರು, ಪ್ರಾರಂಭದಲ್ಲಿ ಸ್ವಂತ ಪರಿಶ್ರಮದಿಂದ ಹಾಡುತ್ತಾ, ಸಂಗೀತ ಅಭ್ಯಸಿಸಿರುವ ಆಧುನಿಕ ಏಕಲವ್ಯನಾಗಿದ್ದು ನಂತರ , ಮದೂರು ಬಾಲಸುಬ್ರಹ್ಮಣ್ಯ ಮತ್ತು ಉಡುಪಿ ವಾಸುದೇವ ಭಟ್ ರವರಿಂದ ಸುಗಮ ಸಂಗೀತವನ್ನು ಹಾಗೂ ಮಹಾಬಲೇಶ್ವರ ಭಾಗವತ್ ರವರಿಂದ ಹಿಂದೂಸ್ತಾನಿ ಸಂಗೀತವನ್ನು ಅಭ್ಯಾಸ ಮಾಡಿದ್ದಾರೆ. ಪ್ರತಿ ವರ್ಷ ನಿರಂತರವಾಗಿ ಕಾರ್ಯಕ್ರಮಗಳನ್ನು ನೀಡುತ್ತಾ, ತನ್ನ ಕಲೆಗೆ ಪ್ರೋತ್ಸಾಹ ನೀಡುತ್ತಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಾತರ್ಾ ಇಲಾಖೆಗಳಿಗೆ ಧನ್ಯವಾದ ಅಪರ್ಿಸುವ ಈ ಕಲಾವಿದ , ತನ್ನದೇ ಅಕರ್ೆಸ್ಟ್ರಾ ತಂಡದೊಂದಿಗೆ ರಾಜ್ಯೋತ್ಸವ ಹಾಗೂ ಗಣೇಶ ಹಬ್ಬಗಳಂದು ರಾಜ್ಯದ ವಿವಿದೆಡೆ ನೂರಾರು ಕಾರ್ಯಕ್ರಮವನ್ನು ನೀಡಿದ್ದಾರೆ. ಅಲ್ಲದೇ ಹಲವಾರು ಸಂಗೀತ ಕಾರ್ಯಕ್ರಮಗಳಲ್ಲಿ ತೀಪುಗಾರರಾಗಿ ಸೇವೆ ಸಲ್ಲಿಸಿದ್ದು, ಹಾಸ್ಟೆಲ್ ನಲ್ಲಿ ಕಲಿಯುತ್ತಿರುವ ಹಿಂದುಳಿದ ವರ್ಗಗಳ ಹೆಣ್ಣು ಮಕ್ಕಳಿಗೆ ಸಂಗೀತ ತರಭೇತಿಯನ್ನೂ, ಹಾಗೂ ಆರೋಗ್ಯ ಇಲಾಖೆಯ ಆಶಾ ತರಭೇತಿ ಕಾರ್ಯಕ್ರಮದ ಜಿಲ್ಲಾ ಸಂಪರ್ಕ ಕೌಶಲ್ಯ ತರಭೇತಿದಾರರಾಗಿ ಆಶಾ ಕಾರ್ಯಕತರ್ೆಯರಿಗೆ ತರಭೇತಿಯನ್ನು ನೀಡುತ್ತಿದ್ದಾರೆ. ಸಂಗೀತ ಮಾತ್ರವಲ್ಲದೇ ತನ್ನದೇ ಆದ " ಸಂದೇಶ" ಬೀದಿ ನಾಟಕ ತಂಡವನ್ನು ಕಟ್ಟಿ , ಅದರ ಮೂಲಕ ಸಾಮಾಜಿಕ ಜಾಗೃತಿ ಉಂಟು ಮಾಡುವ ಕಾರ್ಯಕ್ರಮಗಳಾದ ಮಾಹಿತಿ ಹಕ್ಕು , ಸ್ತ್ರೀ ಶಕ್ತಿ, ಸಂಧ್ಯಾ ಸುರಕ್ಷೆ , ಗ್ರಾಹಕ ಜಾಗೃತಿ , ಸಾವಯವ ಕೃಷಿ ಹಾಗೂ ಆರೋಗ್ಯಕ್ಕೆ ಸಂಬಂದಿಸಿದಂತೆ ಬೀದಿ ನಾಟಕ ಪ್ರದಶರ್ಿಸಿದ್ದಾರೆ. ಉತ್ತಮ ವಾಕ್ ಪ್ರವೀಣ್ಯತೆಯನ್ನು ಹೊಂದಿದ್ದು, ಅನೇಕ ಸರಕಾರಿ ಕಾರ್ಯಕ್ರಮಗಳಲ್ಲಿ ನಿರೂಪಕರಾಗಿ ಕಾರ್ಯ ನಿರ್ವಸಿರುವುದಲ್ಲದೇ, ಮಂಗಳೂರು ಆಕಾಶವಾಣಿಯ "ಬಿ" ಗ್ರೇಡ್ ಕಲಾವಿದರಾಗಿರುವ ಶ್ರೀಯುತರು , ದೂರದರ್ಶನದ ಚಂದನ ವಾಹಿನಿಯಲ್ಲಿ ಭಾವಗೀತೆ ಮತ್ತು ಜನಪದ ಗೀತೆ ಕಾರ್ಯಕ್ರಮವನ್ನು ಸಾದರಪಡಿಸಿದ್ದಾರೆ.ಮತ್ತು ಮಂಗಳೂರು ಆಕಾಶವಾಣಿಯ ಹಲವಾರು ಜಾಹೀರಾತುಗಳಿಗೆ ದ್ವನಿ ನೀಡಿದ್ದಾರೆ. ಶ್ರೀಯುತರಿಗೆ ಮಂಗಳೂರಿನಲ್ಲಿ "ರಾಜ್ಯಮಟ್ಟದ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ-2000" , ಕುಂದಾಪುರ ತಾಲೂಕು ಬೈಂದೂರಿನಲ್ಲಿ ನಡೆದ 2006 ರ ಸುವರ್ಣ ಸಂಸ್ಕೃತಿ ದಿಬ್ಬಣ ಕಾರ್ಯಕ್ರಮದಲ್ಲಿ ಸನ್ಮಾನ , 2006 ರ "ಉಡುಪಿ ಜಿಲ್ಲಾ ಸುವರ್ಣ ಕನರ್ಾಟಕ ರಾಜ್ಯೋತ್ಸವ ಪ್ರಶಸ್ತಿ," 2006 ರಲ್ಲಿ ಉಡುಪಿ ಆಫೀಸರ್ಸ್ ಕ್ಲಬ್ ವತಿಯಿಂದ ಸಂಗೀತ ಸೇವೆಯ ಸಾಧನೆಗಾಗಿ "ಉತ್ತಮ ಸಂಗೀತ ಗಾಯಕ" ಪ್ರಶಸ್ತಿ ,ಗಂಗೊಳ್ಳಿ, ಕುಂದಾಪುರ , ಬೈಂದೂರು ಗಳಲ್ಲಿ ಸನ್ಮಾನ ಹಾಗೂ 2008 ಹಾಗೂ 2009 ರಲ್ಲಿ ಮುಂಭೈನಲ್ಲಿ ಸಂಗೀತ ಕಾರ್ಯಕ್ರಮ ನೀಡಲು ಆಹ್ವಾನಿಸಿ ಸನ್ಮಾನಿಸಲಾಗಿದೆ. ಶ್ರೀಯುತರು 2007 ರಲ್ಲಿ ಉಡುಪಿಯಲ್ಲಿ ನಡೆದ 74 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕುಂದಗನ್ನಡ ಸಂಗೀತ ಕಾರ್ಯಕ್ರಮ ನೀಡಿದ್ದು , ಮೈಸೂರು, ಬೆಂಗಳೂರು , ಉ.ಕನ್ನಡ ಸೇರಿದಂತೆ ರಾಜ್ಯಾದ್ಯಂತ ಮತ್ತು ಹೊರ ರಾಜ್ಯದ ಮುಂಭ್ಯೆ ನಲ್ಲಿ ಸಹ ಸುಗಮ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಸಕರ್ಾರದ ಕಾರ್ಯಕ್ರಮಗಳಲ್ಲಿ ಒಂದಾದ ಭಾಗ್ಯಲಕ್ಷ್ಮಿ ಕುರಿತ ಸಾಕ್ಷ್ಯಚಿತ್ರದಲ್ಲಿ ಅಭಿನಯಿಸಿರುವುದಲ್ಲದೇ, "ಕುಂದಗನ್ನಡ ಜನಪದ ಗೀತೆ" ಹಾಗೂ "ಕೂಲಿಯ ಬಾಲಕರು ಶಾಲೆಗೆ ಬಂದರು" ಎಂಬ 2 ಧ್ವನಿ ಸುರುಳಿಗಳನ್ನು ಸಹ ಬಿಡುಗಡೆ ಮಾಡಿದ್ದಾರೆ. ಸಂಗೀತ ಕಲಾವಿದನಿಗೆ ಸ್ವರ ಮಾಧುರ್ಯ ಕಾಪಾಡಿಕೊಳ್ಳುವುದು ಅಗತ್ಯ ಎಂದು ಮನಗಂಡಿರುವ ಈ ಕಲಾವಿದ , ಆಹಾರ, ಕುಡಿಯುವ ನೀರಿನ ವಿಷಯದಲ್ಲಿ ಅತ್ಯಂತ ಶಿಸ್ತು ಅಳವಡಿಸಿಕೊಂಡಿದ್ದಾರೆ. ಯಾವುದೇ ಪ್ರಶಸ್ತಿ , ಸನ್ಮಾನ ಪಡೆದರೂ ಕಲಾವಿದನಿಗೆ ವಿಧೇಯತೆ ಮುಖ್ಯವೆನ್ನುವ ಇವರು , ಮೃದುಭಾಷಿ , ಸರಳತೆ , ಮುಗ್ಧತೆ ಹೊಂದಿರುವ ಕಲಾವಿದರಾಗಿದ್ದಾರೆ.
(ಫೋಟೋ ಗಣೇಶ್ ಪೈಲ್ ನಲ್ಲಿದೆ.)

"ಆಶಾ" ಲೇಖನ

ಗ್ರಾಮೀಣ ಜನರ ಆರೋಗ್ಯ "ಆಶಾ"
ಯಾವುದೇ ದೇಶ ಅಬಿವೃದ್ಧಿ ಹೊಂದಲು ಆ ದೇಶದ ಆಥರ್ಿಕ ಅಭಿವೃದ್ದಿಗಿಂತ ಮುಖ್ಯವಾಗಿ ದೇಶದ ಜನರ ಆರೋಗ್ಯ ಅಬಿವೃದ್ಧಿ ಅತ್ಯಂತ ಮುಖ್ಯ. ಆದ್ದರಿಂದಲೇ ವಿಶ್ವದ ಎಲ್ಲಾ ರಾಷ್ಟ್ರಗಳು ತಮ್ಮ ಪ್ರಜೆಗಳ ಆರೋಗ್ಯ ಅಭಿವೃದ್ದಿಗಾಗಿ ಅತ್ಯಂತ ಹೆಚ್ಚು ಗಮನ ಹರಿಸುತ್ತಿದ್ದು, ತಮ್ಮ ಪ್ರತಿ ವರ್ಷದ ಬಜೆಟ್ ನಲ್ಲಿ ಅತ್ಯಂತ ಹೆಚ್ಚು ಹಣವನ್ನು ಆರೋಗ್ಯಕ್ಕಾಗಿ ಮೀಸಲಾಗಿಡುತ್ತಿವೆ. ಆರೋಗ್ಯವೇ ಭಾಗ್ಯ ಎಂಬಂತೆ, ಆರೋಗ್ಯವಂಥ ಸಮಾಜ ರಾಷ್ಟ್ರದ ಅಭಿವೃದ್ದಿಗೆ ಅಗತ್ಯ. ನಮ್ಮ ರಾಷ್ಟ್ರದಲ್ಲಿ ಅತ್ಯಂತ ಹೆಚ್ಚು ಜನ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದು, ಗ್ರಾಮೀಣ ಜನತೆಯ ಆರೋಗ್ಯವನ್ನು ಉತ್ತಮಗೊಳಿಸಲು 2005 ರ ಏಪ್ರಿಲ್ 12 ರಂದು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ನ್ನು ಸಕರ್ಾರ ಜಾರಿಗೆ ತಂದಿದೆ. ಈ ಕಾರ್ಯಕ್ರಮದ ಒಂದು ಅಂಗವಾಗಿ ಗ್ರಾಮೀಣ ಮಹಿಳೆಯರಲ್ಲಿ ಸ್ವಯಂ ಸೇವಕರನ್ನು ಗುರುತಿಸಿ ಅವರಿಗೆ ಆಶಾ ಕಾರ್ಯಕರ್ತರಾಗಿ ತರಬೇತಿ ನೀಡಲಾಗುತ್ತದೆ. ಈ ಕಾರ್ಯಕತರ್ೆಯರು ಗ್ರಾಮೀಣ ಜನತೆ ಮತ್ತು ಆರೋಗ್ಯ ಕಾರ್ಯಕ್ರಮಗಳ ಮದ್ಯೆ ಸೇತುವೆಯಂತೆ ಕಾರ್ಯ ನಿರ್ವಹಿಸಿ ರಾಷ್ಟ್ರೀಯ ಆರೋಗ್ಯ ಅಭಿವೃದ್ಧಿಮತ್ತು ಜನಸಂಖ್ಯೆ ನೀತಿ ಸಾಧನೆಯ ಅಬಿವೃದ್ಧಿಗೆ ನೆರವು ನೀಡಲಿದ್ದಾರೆ. ಆಶಾಗೆ ಬೇಕಾದ ಅರ್ಹತೆ : ಸ್ಥಳೀಯ ಗ್ರಾಮದಲ್ಲಿ ವಾಸಿಸುವ ,25 ರಿಂದ 45 ವರ್ಷದೊಳಗಿನ , 8 ನೇ ತರಗತಿ ಉತ್ತೀರ್ಣರಾಗಿರುವ ವಿವಾಹಿತ/ವಿಧವೆ/ ವಿಚ್ಛೇದಿತ ಮಹಿಳೆಯರು ಆಶಾ ತರಭೇತಿ ಪಡೆಯಲು ಅರ್ಹರಿರುತ್ತಾರೆ.ತರಭೇತಿ: ಆಯ್ಕೆಯಾದ ಮಹಿಳೆಯರಿಗೆ 23 ದಿನಗಳ ತರಬೇತಿಯನ್ನು ನೀಡಲಾಗುವುದು , ತರಭೇತಿಯ ಅವಧಿಯಲ್ಲಿ ಉಚಿತ ಊಟ , ವಸತಿಯೊಂದಿಗೆ ರೂ.1500.00 ಗಳ ತರಭೇತಿ ಭತ್ಯೆಯನ್ನು ನೀಡಲಾಗುವುದು. ತರಭೇತಿಯಲ್ಲಿ, ಸಾಮೂಹಿಕ ಔಷಧ ವಿತರಣೆ, ನವಜಾತ ಶಿಶು ಆರೋಗ್ಯ, ಗಭರ್ಿಣಿಯರ ಆರೋಗ್ಯ, ಸ್ತನಪಾನದ ಮಹತ್ವ, ಶೌಚಾಲಯಗಳ ಬಳಕೆಯ ಮಹತ್ವ , ಮಹಿಳೆಯರಿಗೆ ಸಂಬಂದಿಸಿದ ಸಮಸ್ಯೆಗಳು ಹಾಗೂ ಪ್ರಥಮ ಚಿಕಿತ್ಸೆ ನೀಡುವ ಕುರಿತಂತೆ ತರಬೇತಿ ನೀಡಲಾಗುವುದು. ತರಬೇತಿ ಪಡೆದ ನಂತರ ಆಶಾ ಕಾರ್ಯಕತರ್ೆಯರು ತಮ್ಮ ಗ್ರಾಮದ ಪ್ರತಿ ಮನೆಯನ್ನು ಸಂಪಕರ್ಿಸಿ , ಗ್ರಾಮದಲ್ಲಿರುವ ಆರೋಗ್ಯಕ್ಕೆ ಸಂಬಂದಪಟ್ಟ ಸಮಸ್ಯೆಗಳನ್ನು ತಿಳಿದು, ರೋಗ ಪೀಡಿತರನ್ನು ಸ್ಥಳಿಯ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಸೂಖ್ತ ಚಿಕಿತ್ಸೆಯನ್ನು ದೂರಕಿಸುವರು. ಗ್ರಾಮದಲ್ಲಿರುವ ಗಭರ್ಿಣಿಯರಿಗೆ ತೆಗೆದುಕೊಳ್ಳಬೇಕಾದ ಪೌಷ್ಠಿಕ ಆಹಾರ, ಚುಚ್ಚು ಮದ್ದುಗಳು , ಮಾತ್ರೆಗಳು, ಪ್ರಸವ ಪೂರ್ವ ನಿಯಮಿತ ತಪಾಸಣೆ,ಶುಚಿತ್ವ , ಕುಟುಂಬ ಯೋಜನೆಯ ಮಹತ್ವ , ಗರ್ಭ ನಿರೋಧಕಗಳ ಬಳಕೆ ಕುರಿತು ಮಾಹಿತಿಯನ್ನು ನೀಡುವರು. ಅಲ್ಲದೇ ಆಶಾ ಕಾರ್ಯಕರ್ತರಿಗೆ ಆರೋಗ್ಯ ಕಿಟ್ ನೀಡಲಾಗುತ್ತಿದ್ದು,ಅವಶ್ಯವಿದ್ದಲ್ಲಿ ಪ್ರಥಮ ಚಿಕಿತ್ಸೆಯನ್ನು ಸಹ ಆಶಾ ಕಾರ್ಯಕರ್ತರು ನೀಡುವರು. ಗ್ರಾಮದಲ್ಲಿ ಶೌಚಾಲಯಗಳ ಬಳಕೆ, ಆರೋಗ್ಯಕರ ಜೀವನ ವಿಧಾನ, ಗ್ರಾಮದ ಹದಿಹರೆಯದ ಹೆಣ್ಣುಮಕ್ಕಳ ಸಮಸ್ಯೆಗಳಿಗೆ ಪರಿಹಾರ ಮತ್ತು ಆರೋಗ್ಯ ಇಲಾಖೆಯ ಕಾರ್ಯಕ್ರಮಗಳನ್ನು ಗ್ರಾಮಸ್ಥರಿಗೆ ತಲುಪಿಸುವುದಲ್ಲದೇ, ಸಾಂಕ್ರಾಮಿಕ ರೋಗಗಳು ಹರಡದಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಹಾಗೂ ಹೆಚ್.ಐ.ವಿ ಮುಂತಾದ ಲೈಂಗಿಕ ರೋಗಗಳಿಗೆ ಆಪ್ತ ಸಲಹೆಯನ್ನು ನೀಡುವ ಮೂಲಕ ಆಶಾ ಕಾರ್ಯಕರ್ತರು, ಆರೋಗ್ಯ ಸೌಲಭ್ಯದಿಂದ ವಂಚಿತರಾದ, ಹಿಂದುಳಿದ ಗ್ರಾಮೀಣ ಪ್ರದೇಶದ ಜನತೆಗೆ ಆರೋಗ್ಯ ಸೇವೆ ಒದಗಿಸಿಕೊಡುವ ಮೂಲಕ , ಸ್ವಸ್ಥ ಸಮಾಜ , ಸ್ವಸ್ಥ ಗ್ರಾಮ , ಆರೋಗ್ಯವಂತ ರಾಷ್ಟ್ರನಿಮರ್ಾಣ ಕಾರ್ಯದಲ್ಲಿ ಆಶಾ ಪಾತ್ರ ಬಹುಮುಖ್ಯವಾದುದು.
ಬಿ. ಶಿವಕುಮಾರ್ ಶಿವ ಸದನ, ಸಿಟಿ ಆಸ್ಪತ್ರೆ ಹತ್ತಿರ ಉಡುಪಿ