Friday, May 31, 2013

TOBACO


ಲೇಖನ.



ಮಾನವ ಕುಲಕ್ಕೆ ಕಂಟಕವಾಗಿರುವ ತಂಬಾಕು ಸೇವನೆ.



ಬಡವ ಶ್ರೀಮಂತ ಮೇಲು ಕೀಳು ಬೇಧವಿಲ್ಲದೇ ಪ್ರತಿ ವರ್ಷ 6 ಮಿಲಿಯನ್ ಜನರನ್ನು ತನ್ನ ನೇರವಾಗಿ ಸಾವಿನ ತೆಕ್ಕೆಗೆ ತೆಗೆದುಕೊಳ್ಳುತ್ತಿರುವ ಮತ್ತು ನೇರ ತಂಬಾಕು ಬಳಸಿದಿದ್ದರೂ ತಂಬಾಕು ಬಳಸುವ ವ್ಯಕ್ತಿಯ ಹೊರಬಿಡುವ ಹೊಗೆಯಿಂದ ಸಮೀಪದಲ್ಲಿರುವ ಸುಮಾರು 6 ಲಕ್ಷ ಮಂದಿ ಪ್ರತಿ ವರ್ಷ ಸಾವೀಗೀಡಾಗುತ್ತಿದ್ದು, ಈ ತಂಬಾಕು ಮಾನವ ಕುಲಕ್ಕೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ.

ತಂಬಾಕು ಎಂದರೆ ಕೇವಲ ಬೀಡಿ,ಸಿಗರೇಟ್ , ಹುಕ್ಕಾ ಸೇವನೆ ಮಾತ್ರ ಆಗಿರದೆ, ಗುಟ್ಕಾ,ಖೈನಿ, ಪಾನ್ ಮಸಾಲ ಮುಂತಾದವುಗಳಲ್ಲಿ ಕೂಡಾ ತಂಬಾಕು ಬಳಸಲಾಗುತ್ತಿದ್ದು, ಈ ಉತ್ಪನ್ನಗಳನ್ನು ಸೇವನೆಯನ್ನು ಪ್ರಚೋದಿಸಲು ಖ್ಯಾತ ಸಿನಿಮಾ ನಟರು, ಆಟಗಾರರನ್ನು ಆಕರ್ಷಕ ಜಾಹೀರಾತುಗಳಲ್ಲಿ ಬಳಸಿಕೊಳ್ಳುತ್ತಿರುವುದರಿಂದ ಅಧಿಕ ಸಂಖ್ಯೆಯ ಜನ ಈ ಚಟಕ್ಕೆ ದಾಸರಾಗುತ್ತಿರುವುದನ್ನು ಮನಗಂಡ ವಿಶ್ವ ಆರೋಗ್ಯ ಸಂಸ್ಥೆಯು 2013 ರ ಮೇ 31 ರಂದು ತಂಬಾಕು ಜಾಹೀರಾತು, ಉತ್ತೇಜನ ಮತ್ತು ಪ್ರಾಯೋಜಕತ್ವ ನಿಷೇಧ (ಃಚಿಟಿ ಣಠಛಠಛಿಠ-ಚಿಜತಜಡಿಣಟಿರ-ಠಿಡಿಠಟಠಣಠಟಿ ಚಿಟಿಜ ಠಿಠಟಿಠಡಿಠಿ) ಎಂಬ ಧ್ಯೇಯವಾಕ್ಯದೊಡನೆ ವಿಶ್ವ ತಂಬಾಕು ನಿಷೇಧ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸುತ್ತಿದೆ.

ವಿಶ್ವ ಆರೋಗ್ಯ ಸಂಸ್ಥೆ ವರದಿಯಂತೆ ವಿಶ್ವದಾದ್ಯಂತ ಶೇ.78 ರಷ್ಟು 13 ರಿಂದ 15 ವರ್ಷದೊಳಗಿನ ಯುವ ಜನತೆ ತಂಬಾಕು ಉತ್ಪನ್ನಗಳ ಕುರಿತ ಜಾಹೀರಾತುಗಳ ಪ್ರಭಾವಕ್ಕೆ ಒಳಗಾಗುತ್ತಿದ್ದು,ಇಂತಹ ಜಾಹೀರಾತುಗಳನ್ನು ಕಡ್ಡಾಯವಾಗಿ ನಿಷೇಧಿಸುವಂತೆ ಹಾಗೂ ಈ ರೀತಿಯ ಜಾಹೀರಾತುಗಳನ್ನು ನಿಷೇಧಿಸಿರುವುದರಿಂದ ವಿಶ್ವದ ತಂಬಾಕು ಪೀಡಿತ ದೇಶಗಳ ನಾಗರೀಕರಲ್ಲಿ ತಂಬಾಕು ಸೇವನೆ ಪ್ರಮಾಣ ಶೇ.7 ರಷ್ಟು ಕಡಿಮೆಯಾಗಿದೆ ಎಂದು ತಿಳಿಸಿದೆ.



ತಂಬಾಕು ಪೀಡಿತರಲ್ಲಿ ಶೇ.80 ರಷ್ಟು ಜನಸಂಖ್ಯೆ ಅಭಿವೃದ್ಧಿ ಶೀಲ ಮತ್ತು ಹಿಂದುಳಿದ ದೇಶಗಳಿಗೆ ಸೇರಿದ್ದು, ಈ ದೇಶಗಲ್ಲಿನ ಬಡ ಜನತೆ ಈ ಚಟಕ್ಕೆ ಬಲಿಯಾಗಿ ತಮ್ಮ ಜೀವನದ ಹೆಚ್ಚಿನ ದುಡಿಮೆಯನ್ನು ತಂಬಾಕಿನಿಂದ ಹರಡುವ ಮಾರಕ ಕಾಯಿಲೆಗಳ ತಮ್ಮ ಚಿಕಿತ್ಸೆಗಳಿಗೆ ವೆಚ್ಚ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ.

ಭಾರತದಲ್ಲಿ 15 ವರ್ಷ ಮೇಲಪಟ್ಟ ಶೇ.30 ರಷ್ಟು ಜನ ತಂಬಾಕಿನ ವಿವಿಧ ಉತ್ಪನ್ನಗಳಿಗೆ ದಾಸರಾಗಿದ್ದು,ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ದೂಮಪಾನಕ್ಕೆ ಹಾಗೂ ಮಹಿಳೆಯರು ಅಗಿಯುವ ರೂಪದ ತಂಬಾಕು ಉತ್ಪನ್ನಗಳನ್ನು ಬಳಸುತ್ತಿದ್ದಾರೆ.

ತಂಬಾಕಿನಲ್ಲಿರುವ ನಿಕೋಟಿನ್ ಅಂಶವು ಹೆರಾಯಿನ್ ಮತ್ತು ಕೊಕೈನ್ ನಲ್ಲಿರುವಂತಹ ಮಾದಕ ಅಂಶಗಳನ್ನು ಓಳಗೊಂಡಿದ್ದು, ಇದನ್ನು ಬಳಸುವ ವ್ಯಕ್ತಿಯು ಮಾನಸಿಕ ಮತ್ತು ದೈಹಿಕವಾಗಿ ಇದಕ್ಕ ದಾಸನಾಗುತ್ತಾನೆ. ತಂಬಾಕಿನಲ್ಲಿ ಸುಮಾರು 4000 ವಿವಿಧ ರಾಸಾಯನಿಕಗಳಿದು ಇವುಗಳಲ್ಲಿ ಸುಮಾರು 60 ರಾಸಾಯನಿಕಗಳು ಬಾಯಿ , ಗಂಟಲು , ಶ್ವಾಸಕೋಶ ಕ್ಯಾನ್ಸರ್ ಮತ್ತು ಪಾರ್ಶವಾಯು ನಂತಹ ಮಾರಕ ಕಾಯಲೆಗಳಿಗಿ ಕಾರಣವಾಗುತ್ತಿದ್ದು, ಭಾರತದಲ್ಲಿ ತಂಬಾಕು ಬಳಕೆಯಿಂದ ಬಾಯಿ ಕ್ಯಾನ್ಸರ್ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದೆ.

ತಂಬಾಕು ವ್ಯಸನವನ್ನು ಬಿಡಿಸಲು ಯಾವುದೇ ಔಷಧಿ ಇಲ್ಲ ಆದರೆ, ಈ ವ್ಯಸನಕ್ಕೆ ಒಳಗಾದ ವ್ಯಕ್ತಿಯು ಮನೋಸ್ಥೆರ್ಯ ಮತ್ತು ಇದರಿಂದ ಹರಡುವ ಕಾಯಿಲೆಗಳ ಕುರಿತು ಅರಿತು ಸ್ವಯಂ ನಿಯಂತ್ರಣದಿಂದ ಇದರಿಂದ ಹೊರಬರಬಹುದಾಗಿದೆ. ಈ ನಿಟ್ಟಿನಲ್ಲಿ ವ್ಯಕ್ತಿಯ ಸಮಾಜ, ಸಮುದಾಯ, ಕುಟುಂಬಗಳು ಅಗತ್ಯ ಮಾನಸಿಕ ನೆರವು ನೀಡುವುದು ಅವಶ್ಯಕವಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಜಗತ್ತಿನಲ್ಲಿ ತಂಬಾಕು ಸೇವನೆಯಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳ ಕುರಿತು ಹಾಗೂ ಇನ್ನು ತಡೆಗಟ್ಟಲು ಅನೆಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಮೇ 31 ರಂದು ನಡೆಯುವ ವಿಶ್ವ ತಂಬಾಕು ರಹಿತ ದಿನಾಚರಣೆಯಲ್ಲಿ ಪಾಲ್ಗೊಂಡು ಪ್ರಸ್ತುತ ತಂಬಾಕು ವ್ಯಸನದಿಂದ ಬಳಲುತ್ತಿರುವ ಜನರಿಗೆ ಇದರಿಂದ ಮುಕ್ತರಾಗುವಂತೆ ಮತ್ತು ತಂಬಾಕು ವ್ಯಸನಕ್ಕೆ ಬಲಿಯಾಗದಂತೆ ತಂಬಾಕಿನ ದುಷ್ಪರಿಣಮಗಳ ಕುರಿತು ಮುಂದಿನ ಪೀಳಿಗೆಗೆ ಅರಿವು ಮೂಡಿಸಿ, ತಂಬಾಕು ರಹಿತ ವಿಶ್ವದ ಗುರಿ ಹೊಂದಿರುವ ವಿಶ್ವಸಂಸ್ಥೆಯ ಕಾರ್ಯಗಳಲ್ಲಿ ಭಾಗಿಯಾಗೋಣ.








































Wednesday, April 24, 2013

Sveep

           

ಲೇಖನ.
 
ಬಲಿಷ್ಠ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಸ್ವೀಪ್ ಯೋಜನೆ.


          ಪ್ರಜಾಪ್ರಭುತ್ವದ ಯಶಸ್ವಿಗೆ ಚುನಾವಣೆ ಅಗತ್ಯ ಹಾಗೆಯೇ ಯಶಸ್ವಿ ಚುನಾವಣೆಗೆ ಮತದಾರರ ಭಾಗವಹಿಸುವಿಕೆ ಅತ್ಯಂತ ಅಗತ್ಯವಾದುದು.
        ಆದರೆ ಇತ್ತೀಚಿನ ಚುನಾವಣೆಗಳಲ್ಲಿ ಮತದಾರರ ಭಾಗವಹಿಸುವಿಕೆಯ ಆಸಕ್ತಿ ಕಡಿಮೆಯಾಗುತ್ತಿದ್ದು, ಮತದಾರರಿಗೆ ಚುನಾವಣೆಯ ಮಹತ್ವ, ಚುನಾವಣೆಯಲ್ಲಿ ಭಾಗವಹಿಸುವಿಕೆಯ ಪ್ರಯೋಜನ, ಉತ್ತಮ ಮತ್ತು ಬಲಿಷ್ಠ ಪ್ರಜಾಪ್ರಭುತ್ವದ ನಿರ್ಮಾಣಕ್ಕೆ ಮತದಾನ ಎಷ್ಟು ಮುಖ್ಯ ಎನ್ನುವ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಭಾರತ ಚುನಾವಣಾ ಆಯೋಗ ಸ್ವೀಪ್ (ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣೆಯಲ್ಲಿ ಭಾಗವಹಿಸುವಿಕೆ ಖಥಿಣಜಟಚಿಣಛಿ ಗಿಠಣಜಡಿ' ಇಜಣಛಿಚಿಣಠಟಿ ಂಟಿಜ ಇಟಜಛಿಣಠಡಿಚಿಟ ಕಚಿಡಿಣಛಿಠಿಚಿಣಠಟಿ) ಎಂಬ ಕಾರ್ಯಕ್ರಮವನ್ನು ಜಾರಿಗೆ ತಂದಿದೆ.
      2009 ರಿಂದ ದೇಶದಲ್ಲಿ ನಡೆದ 12 ರಾಜ್ಯಗಳ ಸಾರ್ವತ್ರಿಕ ಚುನಾವಣೆಯಲ್ಲಿ ಈ ಯೋಜನೆಯ ಮೂಲಕ ಮತದಾನದ ಹೆಚ್ಚಳಕ್ಕೆ ಚುನಾವಣಾ ಆಯೋಗ ಶ್ರಮಿಸಿದೆ. ಅದರಂತೆ ತಮಿಳುನಾಡಿನಲ್ಲಿ ನಡೆದ ಚುನಾವಣೆಯಲ್ಲಿ ಈ ಯೋಜನೆಯಿಂದ ಅಲ್ಲಿನ ಚುನಾವಣೆಯಲ್ಲಿ ಮತದಾರರ ಭಾಗವಹಿಸುವಿಕೆಯ ಪ್ರಮಾಣ ಶೇ.70.82 ರಿಂದ 78.01 ಪ್ರಮಾಣಕ್ಕೆ ಹೆಚ್ಚಳವಾಗಿದೆ. ಉಳಿದಂತೆ ಉತ್ತರಖಂಡದಲ್ಲಿ ಶೇ.59.45 ರಿಂದ 66.17 , ಉತ್ತರ ಪ್ರಧೇಶದಲ್ಲಿ ಶೇ.45.96 ರಿಂದ 59.40 , ಗೋವಾದಲ್ಲಿ ಶೇ.70.51 ರಿಂದ 81.73 ರಷ್ಟು ಹೆಚ್ಚಳವಾಗಿದೆ.ಹಾಗೂ ಈ ಎಲ್ಲಾ ರಾಜ್ಯಗಳಲ್ಲೂ ಮಹಿಳಾ ಮತದಾರರ  ಮತ್ತು ಯುವ ಜನತೆ ಮತ್ತು ನಗರ ಪ್ರದೇಶದ ಮತದಾರರ ಭಾಗವಹಿಸುವಿಕೆಯ ಪ್ರಮಾಣದಲ್ಲಿ ಗಮನಾರ್ಹ ಏರಿಕೆಯಾಗಿದೆ.
         ಪ್ರತಿ ಮತದಾರನೂ ಯಾವುದೇ ಆಮಿಷ, ಒತ್ತಡಗಳಿಗೆ ಒಳಗಾಗದೇ ನಿಭರ್ೀತಿಯಿಂದ ಮತದಾನ ಕೇಂದ್ರಗಳಿಗೆ ಬಂದು ಮತ ಚಲಾಯಿಸಲು ಅನುಕೂಲವಾಗುವಂತೆ ಸ್ವೀಪ್ ಯೋಜನೆಯ ಮೂಲಕ ಹೆಚ್ಚಿನ ಪ್ರಚಾರ ನೀಡಲಾಗುತ್ತಿದೆ.
ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ವಿಧಾನ ಸಭಾ ಚುನಾವಣೆಯಲ್ಲಿ ಸ್ವೀಪ್ ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾದಿಕಾರಿಗಳ ಅಧ್ಯಕ್ಷತೆಯಲ್ಲಿ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳ ಸಮಿತಿಯನ್ನು ರಚಿಸಿದ್ದು, ಸ್ವೀಪ್ ಪ್ರಚಾರಕ್ಕಾಗಿ ಪ್ರತಿ ಜಿಲ್ಲೆಗ ರೂ.2.5 ಲಕ್ಷಗಳನ್ನು ಬಿಡುಗಡೆ ಮಾಡಿದ್ದು, ಈ ಅನುದಾನದಲ್ಲಿ ಮತದಾನದ ಜಾಗೃತಿ ಕುರಿತ ಬ್ಯಾನರ್ ಗಳು, ಪೋಸ್ಟರ್ ಗಳು , ಫ್ಲೆಕ್ಸ್ ಗಳು , ಬೀದಿ ನಾಟಕಗಳು ಮುಂತಾದ  ಪ್ರಚಾರ ಕಾರ್ಯಕ್ರಮಗಳ ಮೂಲಕ ಮತಯಂತ್ರಗಳ ಬಳಕೆ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಬದಲಾವಣೆ ಹಾಗೂ ಮತದಾನದ ಮಹತ್ವನ್ನು ಮತದಾರರಿಗೆ ತಲುಪಿಸುವಂತೆ ಸೂಚಿಸಿದೆ.
            ಈ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ 30 ಕೋಟಿ ಮತದಾರರು ಮತದಾನ ಪ್ರಕ್ರಿಯೆಯಿಂದ ದೂರ ಉಳಿದಿದ್ದು ಅದರಲ್ಲಿ ಹೆಚ್ಚಿನ ಸಂಖ್ಯೆಯ ಯುವ ಜನತೆ ಹಾಗೂ ನಗರ ಪ್ರದೇಶದ ಜನತೆ ಇದ್ದು,ಅದಕ್ಕಾಗಿ ಯುವಜನತೆ ಮತ್ತು ನಗರ ಪ್ರದೇಶದ ಜನತೆಯನ್ನು ಗುರಿಯಾಗಿಟ್ಟುಕೊಂಡು , ಪ್ಯಾರಾ ಗ್ಲೈಡರ್ ಮೂಲಕ ಕರಪತ್ರ ಹಂಚಿಕೆ  , ಮೊಬೈಲ್ ಎಸ್.ಎಂ.ಎಸ್ ಮೂಲಕ  ಕಾಲೇಜು ವಿದ್ಯಾಸಂಸ್ಥೆಗಳು, ಯುವ ಜನ ಒಕ್ಕೂಟಗಳು , ಕೈಗಾರಿಕೆಗಳಲ್ಲಿ ದುಡಿಯುತ್ತಿರುವ ಯುವ ಜನತೆ ಮತ್ತು ನಗರ ಪ್ರದೇಶದ ಜನತೆಗೆ ಮತದಾನದ ಸಂದೇಶವನ್ನು ತಲುಪಿಸಲು ಹಾಗೂ ಅಂಚೆ ಕಛೇರಿಗಳು, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮತದಾನ ಸಂದೇಶದ ಬ್ಯಾನರ್ ಗಳನ್ನು ಪ್ರದಶರ್ಿಸುವ  ಹಾಗೂ ಸ್ತ್ರೀಶಕ್ತಿ ಗುಂಪುಗಳು, ಅಂಗನವಾಡಿ ಸಹಾಯಕಿಯರ ಮೂಲಕ ಮನೆ ಮನಗೆ ಕರಪತ್ರಗಳನ್ನು ವಿತರಿಸುವುದರ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತದಾನ ಮಾಡುವಂತೆ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
           ಅಲ್ಲದೇ ಶಾಲಾ ಮಕ್ಕಳಿಗೆ ತಮ್ಮ ಕುಟುಂಬದ ಸದಸ್ಯರಿಂದ ಮತದಾನ ಮಾಡಿಸುವ ಕುರಿತ ಪ್ರತಿಜ್ಞಾ ವಿದಿ ಸ್ವೀಕಾರ, ಹಿಂದುಳಿದ ವರ್ಗದ ಜನತೆ , ಸಮುದಾಯಗಳು ವಾಸಿಸುವ ಸ್ಥಳದಲ್ಲಿ ವಿಶೇಷ ಪ್ರಚಾರ ಹಾಗೂ ಈ ಹಿಂದೆ ನಡೆದ ಚುನಾವಣೆಯಲ್ಲಿ ಕನಿಷ್ಠ ಮತದಾನ ನಡೆದ , ಮತದಾನ ಬಹಿಷ್ಕರಿಸಿದ, ಮತ್ತು ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿ ಆ ಬಾಗದ ಜನತೆಗೆ ಮತದಾನದಲ್ಲಿ ಭಾಗವಹಿಸುವಂತೆ ಧೈರ್ಯ ತುಂಬುವ ಮೂಲಕ ನಿಭರ್ೀತಿಯಿಂದ  ಮತದಾನ ಮಾಡುವಂತೆ ಮನವೊಲಿಸಲು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ.
        ವಿಶೇಷವಾಗಿ ಮತದಾನ ಪ್ರಕ್ರಿಯೆಯಲ್ಲಿ ತೊಡಗುವ ಸರಕಾರಿ  ಸಿಬ್ಬಂದಿಗಳಲ್ಲಿ ಶೇ.50 ಮಂದಿ ಪ್ರತಿ ಚುನಾವಣೆಯಲ್ಲಿ ತಮ್ಮ ಮತದಾನದಿಂದ ವಂಚಿತರಾಗುತ್ತಿದು, ಈ ಬಾರಿ ಶೇ.100 ರಷ್ಟು ಸಿಬ್ಬಂದಿಗಳು ಮತದಾನ ಮಾಡುವಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. 
         ಬಲಿಷ್ಠ ಪ್ರಜಾಪ್ರಭುತ್ವದ ನಿರ್ಮಾಣಕ್ಕೆ ಪಣ ತೊಟ್ಟಿರುವ ಭಾರತೀಯ ಚುನಾವಣಾ ಆಯೋಗ ಎಲ್ಲಾ ಪ್ರಜೆಗಳೂ ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲು ರೂಪಿಸಿರುವ ಈ ಕಾರ್ಯಕ್ರಮದಲ್ಲಿ ನಾವೆಲ್ಲರೂ ತಪ್ಪದೇ ಭಾಗವಹಿಸಿ ಬಲಿಷ್ಠ ಪ್ರಜಾಪ್ರಭುತ್ವ ನಿರ್ಮಾಣದಲ್ಲಿ ಭಾಗಿಯಾಗೋಣ ಮತ್ತು ಉತ್ತಮ ಸರಕಾರದ ರಚನೆಗೆ ಕೈಜೋಡಿಸೂಣ. 

                                                                                               ಬಿ.ಶಿವಕುಮಾರ್
                                                                                         ವಾರ್ತಾ ಇಲಾಖೆ, ಉಡುಪಿ
                                                                                              date-24-4-2013