ಗ್ರಾಮೀಣ ಜನರ ಬಳಿಗೆ ಕಾನೂನು ಸೇವೆಯ ರಥ.
ಸಮಾಜದ ಪ್ರತಿಯೊಬ್ಬ ಪ್ರಜೆಗೂ ನ್ಯಾಯ ದೊರಕಿಸಿಕೊಡುವುದು ನಮ್ಮ ಸಂವಿಧಾನದ ಪ್ರಮುಖ ಉದ್ದೇಶ.ನ್ಯಾಯಾಂಗ ಸಕರ್ಾರದ ಬಹುಮುಖ್ಯವಾದ ಅಂಗ,ಸಮಾಜದ , ದೇಶದ ಪ್ರಜೆಗಳ ಅಭಿವೃದ್ದಿಗೆ ಅಗತ್ಯವಿರುವ ಕಾನೂನುಗಳನ್ನು ರೂಪಿಸಿ , ಬಡವ, ಶ್ರೀಮಂತ , ಮೇಲು, ಕೀಳು ಎಂಬ ಬೇದವಿಲ್ಲದೆ, ಸಮಾಜದ ಕಟ್ಟ ಕಡೆಯ ಹಾಗೂ ದೇಶದ ಯಾವುದೇ ಮೂಲೆಯಲ್ಲಿರುವ ಪ್ರಜೆಗೆ ನ್ಯಾಯ ಒದಗಿಸುವುದು ನ್ಯಾಯಾಂಗದ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ದೇಶದ ಹಲವಾರು ಹಿಂದುಳಿದ ಗ್ರಾಮಗಳಲ್ಲಿ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಜನತೆಗೆ ಅರಿವು ಉಂಟು ಮಾಡುವುದಲ್ಲದೆ , ಸ್ಥಳೀಯ ಸಂಬಂದಪಟ್ಟ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಲು ಅನುಕೂಲವಾಗುವಂತೆ ಕಾನೂನು ಸಾಕ್ಷರತ ರಥ ಕಾರ್ಯಕ್ರಮವನ್ನು ಸಕರ್ಾರ ಜಾರಿಗೆ ತಂದಿದೆೆ. ಸುಸಜ್ಜಿತ ವಾಹನದಲ್ಲಿ , ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಸಂಚರಿಸುವ ಈ ವಾಹನ ಗ್ರಾಮೀಣ ಜನರಿಗೆ ಕಾನೂನು ಮಾಹಿತಿ, ವ್ಯಾಜ್ಯಗಳ ಪರಿಹಾರ ಮತ್ತು ಅಹವಲುಗಳನ್ನು ಸ್ವೀಕರಿಸಿ, ಅಹವಾಲುಗಳನ್ನು ಸಂಬಂದಪಟ್ಟ ಅಧಿಕಾರಿಗಳಿಗೆ ತಲುಪಿಸುತ್ತದೆ. ಅಲ್ಲದೇ ಈವಾಹನದಲ್ಲಿರುವ ಸಂಪನ್ಮೂಲ ವ್ಯಕಿಗಳು, ಜನತೆಗೆ ಕಾನೂನು ಸಾಕ್ಷರತೆಯನ್ನು ನೀಡುವುದರೊಂದಿಗೆ ಲೋಕ್ ಅದಾಲತ್ ಸಹ ನಡೆಸುವರು. ಈಗಾಗಲೇ ರಾಜಾಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯದಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿರುವ ಈ ರಥ , ಇತ್ತೀಚಿಗೆ ಉಡುಪಿ ಜಿಲ್ಲೆಗೆ ಆಗಮಿಸಿದ್ದು, ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ. ಕೆ.ಬಿ. ಚೆಂಗಪ್ಪ ರವರು ಈ ರಥ ಕ್ಕೆ ಚಾಲನೆಯನ್ನು ನೀಡಿದರು. ಈ ರಥವು ಉಡುಪಿ ಜಿಲ್ಲೆಯ 3 ತಾಲೂಕುಗಳಲ್ಲಿ ಸಂಚರಿಸಿ , ಜನತೆಗೆ ಕಾನೂನು ಸಾಕ್ಷರತೆಯನ್ನು ನೀಡಲಿದೆ ಎಂದು ತಿಳಿಸಿದರು. ಒಟ್ಟಿನಲ್ಲಿ ಈ ಕಾನೂನು ಸಾಕ್ಷರತಾ ರಥವು ಗ್ರಾಮೀಣ ಜನತೆಗೆ ಸಂಪೂರ್ಣ ಕಾನೂನು ಅರಿವು ಮೂಡಿಸುವುದಲ್ಲದೇ , ಕಾನೂನಿನ ಮಹತ್ವ ವನ್ನು ತಿಳಿಸುವಲ್ಲಿ ಅತ್ಯಂತ ಪ್ರಯೋಜನಕಾರಿಯಾಗಿದೆ.
ಸಮಾಜದ ಪ್ರತಿಯೊಬ್ಬ ಪ್ರಜೆಗೂ ನ್ಯಾಯ ದೊರಕಿಸಿಕೊಡುವುದು ನಮ್ಮ ಸಂವಿಧಾನದ ಪ್ರಮುಖ ಉದ್ದೇಶ.ನ್ಯಾಯಾಂಗ ಸಕರ್ಾರದ ಬಹುಮುಖ್ಯವಾದ ಅಂಗ,ಸಮಾಜದ , ದೇಶದ ಪ್ರಜೆಗಳ ಅಭಿವೃದ್ದಿಗೆ ಅಗತ್ಯವಿರುವ ಕಾನೂನುಗಳನ್ನು ರೂಪಿಸಿ , ಬಡವ, ಶ್ರೀಮಂತ , ಮೇಲು, ಕೀಳು ಎಂಬ ಬೇದವಿಲ್ಲದೆ, ಸಮಾಜದ ಕಟ್ಟ ಕಡೆಯ ಹಾಗೂ ದೇಶದ ಯಾವುದೇ ಮೂಲೆಯಲ್ಲಿರುವ ಪ್ರಜೆಗೆ ನ್ಯಾಯ ಒದಗಿಸುವುದು ನ್ಯಾಯಾಂಗದ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ದೇಶದ ಹಲವಾರು ಹಿಂದುಳಿದ ಗ್ರಾಮಗಳಲ್ಲಿ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಜನತೆಗೆ ಅರಿವು ಉಂಟು ಮಾಡುವುದಲ್ಲದೆ , ಸ್ಥಳೀಯ ಸಂಬಂದಪಟ್ಟ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಲು ಅನುಕೂಲವಾಗುವಂತೆ ಕಾನೂನು ಸಾಕ್ಷರತ ರಥ ಕಾರ್ಯಕ್ರಮವನ್ನು ಸಕರ್ಾರ ಜಾರಿಗೆ ತಂದಿದೆೆ. ಸುಸಜ್ಜಿತ ವಾಹನದಲ್ಲಿ , ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಸಂಚರಿಸುವ ಈ ವಾಹನ ಗ್ರಾಮೀಣ ಜನರಿಗೆ ಕಾನೂನು ಮಾಹಿತಿ, ವ್ಯಾಜ್ಯಗಳ ಪರಿಹಾರ ಮತ್ತು ಅಹವಲುಗಳನ್ನು ಸ್ವೀಕರಿಸಿ, ಅಹವಾಲುಗಳನ್ನು ಸಂಬಂದಪಟ್ಟ ಅಧಿಕಾರಿಗಳಿಗೆ ತಲುಪಿಸುತ್ತದೆ. ಅಲ್ಲದೇ ಈವಾಹನದಲ್ಲಿರುವ ಸಂಪನ್ಮೂಲ ವ್ಯಕಿಗಳು, ಜನತೆಗೆ ಕಾನೂನು ಸಾಕ್ಷರತೆಯನ್ನು ನೀಡುವುದರೊಂದಿಗೆ ಲೋಕ್ ಅದಾಲತ್ ಸಹ ನಡೆಸುವರು. ಈಗಾಗಲೇ ರಾಜಾಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯದಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿರುವ ಈ ರಥ , ಇತ್ತೀಚಿಗೆ ಉಡುಪಿ ಜಿಲ್ಲೆಗೆ ಆಗಮಿಸಿದ್ದು, ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ. ಕೆ.ಬಿ. ಚೆಂಗಪ್ಪ ರವರು ಈ ರಥ ಕ್ಕೆ ಚಾಲನೆಯನ್ನು ನೀಡಿದರು. ಈ ರಥವು ಉಡುಪಿ ಜಿಲ್ಲೆಯ 3 ತಾಲೂಕುಗಳಲ್ಲಿ ಸಂಚರಿಸಿ , ಜನತೆಗೆ ಕಾನೂನು ಸಾಕ್ಷರತೆಯನ್ನು ನೀಡಲಿದೆ ಎಂದು ತಿಳಿಸಿದರು. ಒಟ್ಟಿನಲ್ಲಿ ಈ ಕಾನೂನು ಸಾಕ್ಷರತಾ ರಥವು ಗ್ರಾಮೀಣ ಜನತೆಗೆ ಸಂಪೂರ್ಣ ಕಾನೂನು ಅರಿವು ಮೂಡಿಸುವುದಲ್ಲದೇ , ಕಾನೂನಿನ ಮಹತ್ವ ವನ್ನು ತಿಳಿಸುವಲ್ಲಿ ಅತ್ಯಂತ ಪ್ರಯೋಜನಕಾರಿಯಾಗಿದೆ.